Advertisement

ಮಾಜಿ ಮೇಯರ್‌ ರೆಡ್ಡಿ ಪುತ್ರನ ವಿರುದ್ಧ ಹಲ್ಲೆ ಪ್ರಕರಣ

11:14 AM Aug 19, 2017 | Team Udayavani |

ಬೆಂಗಳೂರು: ಬಿಬಿಎಂಪಿ ಮಾಜಿ ಮೇಯರ್‌ ಮಂಜುನಾಥ ರೆಡ್ಡಿ ಹಾಗೂ ಅವರ ಪುತ್ರ ಲಿತೇಶ್‌ ರೆಡ್ಡಿ ವಿರುದ್ಧ ಮಡಿವಾಳ ಠಾಣೆಯಲ್ಲಿ ಹಲ್ಲೆ ದೂರು ದಾಖಲಾಗಿದೆ.
ಆಗಸ್ಟ್‌ 15ರಂದು ಮಾರುತಿನಗರದಲ್ಲಿ ಮಳೆ ನೀರು ಮನೆಗೆ ನುಗ್ಗಿತ್ತು.

Advertisement

ಕ್ರಮ ಕೈಗೊಳ್ಳುವಂತೆ ಮಂಜುನಾಥ್‌ ರೆಡ್ಡಿಗೆ ತಿಳಿಸಿದೆವು. ಅದಕ್ಕೆ ರೆಡ್ಡಿ ಸ್ಪಂದಿಸಲಿಲ್ಲ. ಆದ್ದರಿಂದ ನಾವು ನೀರು ತೆರವುಗೊಳಿಸುವ ಕಾರ್ಯಕ್ಕೆ ಮುಂದಾದೆವು. ಈ ವೇಳೆ ಏಕಾಏಕಿ ಸ್ಥಳಕ್ಕೆ ಬಂದ ಮಂಜುನಾಥ್‌ ರೆಡ್ಡಿ ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಲು ಮುಂದಾದರು.

ಅವರ ಪುತ್ರ ಲಿತೇಶ್‌ ರೆಡ್ಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಹರಿನಾಥ್‌ ಹಾಗೂ ರವಿಕುಮಾರ್‌ ರೆಡ್ಡಿ ಎಂಬುವವರು ದೂರು ನೀಡಿದ್ದಾರೆ.ಆರೋಪದ ಹಿನ್ನೆಲೆಯಲ್ಲಿ ಘಟನಾಸ್ಥಳದಲ್ಲಿದ್ದ ಕೆಲವರನ್ನು ವಿಚಾರಣೆಗೊಳಪಡಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next