Advertisement

ಮನೆ ಮುಂದಿ ನಿಲ್ಲಿಸಿಟ್ಟಿದ್ದ ಮಹಾರಾಷ್ಟ್ರ ಮಾಜಿ ಸಚಿವನ ಕಾರು ಕಳವು 

03:13 PM Feb 14, 2017 | Team Udayavani |

ಕೊಲ್ಹಾಪುರ, ಮಹಾರಾಷ್ಟ್ರ : ಮಹಾರಾಷ್ಟ್ರದ ಮಾಜಿ ಸಚಿವ ಎನ್‌ ಡಿ ಪಾಟೀಲ್‌ ಅವರ ರುಯಿಕಾರ್‌ ಕಾಲನಿಯಲ್ಲಿನ ಮನೆಯ ಮುಂದೆ ನಿಲ್ಲಿಸಿಟ್ಟಿದ್ದ ಕಾರು ಫೆ.13-14ರ ನಡುವಿನ ರಾತ್ರಿ ಕಳವಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಚಾಲಕನ ಸೈಡ್‌ ವಿಂಡೋ ಒಡೆದು ಕಾರಿನ ಬಾಗಿಲು ತರೆದು ಡುಪ್ಲಿಕೇಟ್‌ ಕೀ ಬಳಸಿ ಕಾರನ್ನು ಕದಿಯಲಾಗಿದೆ. ಕಾರಿನ ಚಾಲಕ ನೀಲೇಶ್‌ ನಕಾಟಿ ಈ ಬಗ್ಗೆ ದೂರು ನೀಡಿದ್ದಾರೆ.

ಪೊಲೀಸರು ಐಪಿಸಿ ಸೆ.379 ಮತ್ತು 427ರ ಪ್ರಕಾರ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪಾಟೀಲ್‌ ಅವರು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರ ಭಾವನಾಗಿದ್ದು ಮಹಾರಾಷ್ಟ್ರ ಸರಕಾರದಲ್ಲಿ ಸಹಾಯಕ ಸಹಕಾರಿ ಸಚಿವರಾಗಿ ದುಡಿದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next