Advertisement

ರಾಜಕೀಯ ಆಶ್ರಯ ಪಡೆಯಲು ಭಾರತಕ್ಕೆ ಬಂದ ಪಾಕ್‌ ನ ಮಾಜಿ ಶಾಸಕ

09:20 AM Sep 11, 2019 | keerthan |

ಹೊಸದಿಲ್ಲಿ: ಪಾಕ್‌ ನಲ್ಲಿ ಅಲ್ಪಸಂಖ್ಯಾತರನ್ನು ಕಡೆಗಣಿಸಲಾಗುತ್ತಿದೆ ಎಂದು ಅರೋಪಿಸಿ, ಭಾರತದಲ್ಲಿ ರಾಜಕೀಯ ಆಶ್ರಯ ಪಡೆಯಲು ಪಾಕ್‌ ನ ಮಾಜಿ ಶಾಸಕ ಬಲ್ದೇವ್‌ ಕುಮಾರ್‌ ಭಾರತಕ್ಕೆ ಆಗಮಿಸಿದ್ದಾರೆ.

Advertisement

ತನ್ನ ಕುಟುಂಬಿಕರೊಂದಿಗೆ ಹೊಸದೆಹಲಿಗೆ ಬಂದಿರುವ ಬಲ್ದೇವ್‌ ಕುಮಾರ್‌, ಪುಖ್ತುಂಖ್ವಾ ಅಸೆಂಬ್ಲಿಯ ಬರಿಕೋಟ್‌ ಕ್ಷೇತ್ರದ ಮಾಜಿ ಶಾಸಕರಾಗಿದ್ದರು. ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರ ತೆಹ್ರೆಕ್‌ ಎ ಇನ್ಸಾಫ್‌ ಪಕ್ಷದ ಸದಸ್ಯರಾಗಿದ್ದರು.

ಪಾಕಿಸ್ಥಾನದಲ್ಲಿರುವ ಹಿಂದೂಗಳು, ಸಿಖ್ಖರಿಗೆ ಯಾವುದೇ ರೀತಿಯ ರಕ್ಷಣೆ ಸಿಗುತ್ತಿಲ್ಲ. ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಬಲ್ದೇವ್‌ ಕುಮಾರ್‌ ಆರೋಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಪಾಕಿಸ್ಥಾನಕ್ಕೆ ಹಿಂದಿರುಗುವ ಯಾವುದೇ ಅಲೋಚನೆ ಇಲ್ಲ ಎಂದು ಕುಮಾರ್‌ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next