Advertisement

ರಾಸಲೀಲೆ ಪ್ರಕರಣ: ಮೇಟಿಗೆ ಸಿಐಡಿ ‘ಕ್ಲೀನ್‌ ಚಿಟ್‌’

02:55 AM May 25, 2017 | Karthik A |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಮಾಜಿ ಸಚಿವ ಎಚ್‌.ವೈ. ಮೇಟಿ ಅವರ ಸಚಿವ ಸ್ಥಾನಕ್ಕೆ ಕುತ್ತು ತಂದಿದ್ದ ರಾಸಲೀಲೆ ಪ್ರಕರಣ ಸಂಬಂಧ ಸಿಐಡಿ ಸರಕಾರಕ್ಕೆ ವರದಿ ಸಲ್ಲಿಸಿದ್ದು, ಮೇಟಿ ಅವರಿಗೆ ಕ್ಲೀನ್‌ ಚಿಟ್‌ ನೀಡಿದೆ. ರಾಸಲೀಲೆ ಪ್ರಕರಣದ ವೀಡಿಯೊ ಅಸಲಿಯೋ ನಕಲಿಯೋ ಎಂಬ ಕುರಿತು ಮೊದಲು ವಿಚಾರಣೆ ನಡೆಸಿದ ಸಿಐಡಿ, ಅಸಲಿ ವೀಡಿಯೋ ತಮಗೆ ಲಭ್ಯವಾಗಿಲ್ಲ. ನಕಲಿ ವೀಡಿಯೋವನ್ನಾಧರಿಸಿ ಹೇಳುವುದಾದರೆ ಇದೊಂದು ‘ರಾಜಕೀಯ ದುರುದ್ದೇಶಪೂರ್ವಕ ಕೃತ್ಯ’ ಎಂದು ಮೇ 17ರಂದು ಸರಕಾರಕ್ಕೆ ಸಲ್ಲಿಸಿರುವ 8 ಪುಟಗಳ ವರದಿಯಲ್ಲಿ ಸಿಐಡಿ ತಿಳಿಸಿದೆ.

Advertisement

ಸ್ಥಳೀಯ ರಾಜಕೀಯ ನಾಯಕರು ಮೇಟಿ ಅವರ ವೈಯಕ್ತಿಕ ಹಾಗೂ ರಾಜಕೀಯ ವರ್ಚಸ್ಸನ್ನು ತಗ್ಗಿಸಲು ಸೃಷ್ಟಿಸಿದ ವೀಡಿಯೋವನ್ನು ಮಾಧ್ಯಮಗಳು ಪ್ರಸಾರ ಮಾಡಿದ್ದವು. ಈ ವೀಡಿಯೋ ಎಡಿಟ್‌ ಆಗಿದ್ದು, ಅಸಲಿ ವೀಡಿಯೋ ಇನ್ನೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮೇಟಿ ಮೇಲಿನ ಆರೋಪ ಸಾಬೀತುಪಡಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next