Advertisement

Congress ಎರಡು ಬಾಗಿಲಿನ ಬಸ್ : ಶೆಟ್ಟರ್ ಪಕ್ಷ ತೋರೆದ ಕುರಿತು ಸಚಿವ ಲಾಡ್ ಪ್ರತಿಕ್ರಿಯೆ

05:07 PM Jan 25, 2024 | Team Udayavani |

ಧಾರವಾಡ: ಜಗದೀಶ ಶೆಟ್ಟರ್ ಪಕ್ಷ ತೊರೆದ ಕುರಿತು ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಚಿಂತೆ ಇಲ್ಲ ಏಕೆಂದರೆ ಪಕ್ಷವು ಎರಡು ಬಾಗಿಲಿನ ಬಸ್‌ ಇದ್ದಂತೆ ಯಾರು ಬೇಕಾದರೂ ಹತ್ತಬಹುದು, ಇಳಿದು ಹೋಗಬಹುದು” ಎಂದು ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಶೆಟ್ಟರ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಮರು ಸೇರ್ಪಡೆಗೊಂಡಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಲಾಡ್, ಶೆಟ್ಟರ್ ಅವರು ಮತ್ತೆ ಬಿಜೆಪಿಗೆ ಸೇರ್ಪಡೆಗೊಂಡಿದ್ದಕ್ಕೆ ನನಗೆ ಸಂತೋಷವಾಗಿದೆ, ಅವರು ಕಾಂಗ್ರೆಸ್ ಸೇರಲು ಒಂದು ಕಾರಣವಿತ್ತು. ಹಿಂತಿರುಗಲು ಕಾರಣವಿಲ್ಲ ಎಂದರು.

ಈಗ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಬೇಕು ಎಂದು ಮತ್ತೊಂದು ಕಾರಣ ನೀಡಿ ಮತ್ತೆ ಬಿಜೆಪಿಗೆ ಹೋಗುತ್ತಿದ್ದಾರೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದಾಗ ನಾವು ಅವರಿಗೆ ಎಲ್ಲಾ ಗೌರವವನ್ನು ನೀಡಿದ್ದೇವೆ, ಚುನಾವಣೆಯಲ್ಲಿ ಸೋತರೂ ನಾವು ಅವರನ್ನು ಎಂಎಲ್ಸಿ ಮಾಡಿದ್ದೇವೆ, ಪಕ್ಷದ ಎಲ್ಲಾ ವೇದಿಕೆಗಳಲ್ಲಿ ಉನ್ನತ ಹುದ್ದೆಯಲ್ಲಿದ್ದ ಅವರು ಈಗ ಬಿಜೆಪಿ ಸೇರಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next