Advertisement

ಹುತಾತ್ಮ ಪೊಲೀಸರ ಮರೆತ ಹಿಂದಿನ ಸರಕಾರಗಳು: ಪಿಎಂ

12:56 PM Oct 22, 2018 | Team Udayavani |

ಹೊಸದಿಲ್ಲಿ: “ರಾಷ್ಟ್ರಕ್ಕಾಗಿ ಮಡಿದ ಪೊಲೀಸರನ್ನು ಗೌರವಿಸುವ ಕಾರ್ಯ ನೆರವೇರಲು ಸ್ವಾತಂತ್ರಾನಂತರದ 70 ವರ್ಷಗಳು ಬೇಕಾದವು. ಹಿಂದಿನ ಸರಕಾರ ಗಳೇಕೆ ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದ್ದವು ಎನ್ನುವುದೇ ಪ್ರಶ್ನಾರ್ಥಕ’ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ ವಿರುದ್ಧ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.

Advertisement

ಹೊಸದಿಲ್ಲಿಯಲ್ಲಿ ರವಿವಾರ ನೂತನವಾಗಿ ನಿರ್ಮಿಸಲಾದ “ರಾಷ್ಟ್ರೀಯ ಪೊಲೀಸ್‌ ಸ್ಮಾರಕ’ವನ್ನು ಲೋಕಾರ್ಪಣೆ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ, “ರಾಷ್ಟ್ರೀಯ ಪೊಲೀಸ್‌ ಹುತಾತ್ಮ ದಿನ’ವನ್ನು ರಾಷ್ಟ್ರಕ್ಕೆ ಸಮರ್ಪಿಸುವುದಾಗಿ ಹೇಳಿದರು. ರಾಷ್ಟ್ರದ ಪೊಲೀಸ್‌ ಸಿಬ್ಬಂದಿ, ಪ್ಯಾರಾ ಮಿಲಿಟರಿ ಪಡೆ. ವಿಪತ್ತು ನಿರ್ವಹಣಾ ಪಡೆಗಳಲ್ಲಿ ಸೇವೆ ಸಲ್ಲಿಸಿದವರ ಬಗ್ಗೆ ಭಾವಪೂರ್ಣವಾದ ಮಾತುಗಳನ್ನಾಡಿದರು. 

ದೇವರ ಆಯ್ಕೆ: 2014ರಲ್ಲಿ ನಾವು ಅಧಿಕಾರಕ್ಕೆ ಬಂದ ಬಳಿಕ ಇದಕ್ಕೆ ಅನುದಾನ ನೀಡಿದೆವು. ಪರಿಣಾಮ ಇಂದು ಇದಕ್ಕೆ ಸಾಕ್ಷಿಯಾಗುತ್ತಿದ್ದೇವೆ. ಬಹುಶಃ ಆ ದೇವರು ಇಂಥದ್ದೊಂದು ಸ್ಮಾರಕ ನಿರ್ಮಾಣ ಸೇವೆಗೆ ನನ್ನನ್ನು ಆಯ್ಕೆ ಮಾಡಿಕೊಂಡಿದ್ದರು’ ಅನಿಸುತ್ತದೆ ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next