ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದ ಗುಜರಾತ್ ಶಾಸಕ ಅಲ್ಪೇಶ್ ಠಾಕೂರ್ ಅವರು ಸದ್ಯದಲ್ಲೇ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಪೇಶ್ ಅವರು ಪಟಾನ್ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಬಯಸಿದ್ದು, ಕಾಂಗ್ರೆಸ್ ಮತ್ತೂಬ್ಬ ನಾಯಕ ಜಗದೀಶ್ ಠಾಕೂರ್ಗೆ ಟಿಕೆಟ್ ನೀಡಿತ್ತು. ಇದರಿಂದ ಆಕ್ರೋಶಗೊಂಡಿದ್ದ ಅಲ್ಪೇಶ್ ಕಾಂಗ್ರೆಸ್ ತೊರೆದಿದ್ದರು. ಅಲ್ಪೇಶ್ ಅವರು ಹಿಂದಿನಿಂದಲೂ ಗುಜರಾತ್ ಕ್ಷತ್ರಿಯ ಠಾಕೂರ್ ಸೇನಾದಲ್ಲಿ ಗುರುತಿಸಿಕೊಂಡವರು. ಆದರೆ, ಕಾಂಗ್ರೆಸ್ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಈ ಸಂಘಟನೆಯನ್ನು ನಿರ್ಲಕ್ಷಿಸಿದೆ ಎನ್ನುವುದು ಅವರ ಆರೋಪ. ಹೀಗಾಗಿ, ಒಂದೋ ಕ್ಷತ್ರಿಯ ಸೇನೆಯಲ್ಲಿರಬೇಕು ಅಥವಾ ಕಾಂಗ್ರೆಸ್ನಲ್ಲಿರಬೇಕು ಎಂದು ಸಂಘಟನೆಯು ಅಲ್ಪೇಶ್ಗೆ ಎಚ್ಚರಿಕೆ ನೀಡಿತ್ತು. ಈ ಎಲ್ಲ ಬೆಳವಣಿಗೆಗಳಿಂದಾಗಿ ಅಲ್ಪೇಶ್ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದರು.