Advertisement

ಬಿಎಸ್‌ವೈ ಪ್ರವಾಸ ತಡೆಗೆ ಕಸರತ್ತು?

12:07 AM Sep 01, 2021 | Team Udayavani |

ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ಅವರ ರಾಜ್ಯ ಪ್ರವಾಸಕ್ಕೆ ಪಕ್ಷದ ವರಿಷ್ಠರಿಂದಲೇ ಆಕ್ಷೇಪ ವ್ಯಕ್ತವಾಗಿದೆ ಎನ್ನಲಾಗಿದೆ.

Advertisement

ಗಣೇಶೋತ್ಸವ ಮುಗಿಸಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಲು ಯಡಿಯೂರಪ್ಪ ಚಿಂತನೆ ನಡೆಸಿದ್ದರು. ಆದರೆ ವರಿಷ್ಠರು ಅವರ ರಾಜ್ಯ ಪ್ರವಾಸವನ್ನು ತಡೆಯಲು ಕಸರತ್ತು ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಗೊಂದಲ ಸೃಷ್ಟಿ:

ಸದ್ಯ ಬಿಜೆಪಿ ಸರಕಾರವೇ ಅಧಿಕಾರದಲ್ಲಿ ಇರುವುದರಿಂದ ಬಿಎಸ್‌ವೈ ಈಗ ರಾಜ್ಯ ಪ್ರವಾಸ ಮಾಡಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಚುನಾವಣೆ ಇರುವುದು 2023ರಲ್ಲಿ. ಈಗಲೇ ರಾಜ್ಯ ಪ್ರವಾಸ ಮಾಡಿದರೆ ಚುನಾವಣೆಗೆ ಸಿದ್ಧತೆ ಎನ್ನುವ ಅರ್ಥ ಮೂಡುತ್ತದೆ ವಿಪಕ್ಷಗಳು ಇದನ್ನೇ ಅಸ್ತ್ರ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಈಗ ಅಧಿಕೃತ ಕಾರಣವಿಲ್ಲದೆ ರಾಜ್ಯ ಪ್ರವಾಸ ನಡೆಸುವುದು ಸೂಕ್ತವಲ್ಲ ಎಂದು ಪಕ್ಷದ ವರಿಷ್ಠರು ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸಿಂಗ್‌ ಮೂಲಕ ಸಂದೇಶ:

Advertisement

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಮೂಲಕ ಬಿಜೆಪಿ ವರಿಷ್ಠರು ಬಿಎಸ್‌ವೈ ರಾಜ್ಯ ಪ್ರವಾಸ ನಡೆಸದಂತೆ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಜತೆಯಾಗಿ ಪ್ರವಾಸ:

ಮುಂದಿನ ವರ್ಷದ ಜನವರಿಯಲ್ಲಿ ವಿಧಾನ ಪರಿಷತ್ತಿಗೆ 25 ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗುವ ಕ್ಷೇತ್ರ ಗಳಿಗೆ ಚುನಾವಣೆ ನಡೆಯಲಿದೆ. ಅದೇ ವೇಳೆ ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ ಚುನಾವಣೆ ಎದುರಾಗುವ ಸಾಧ್ಯತೆ ಇದೆ. ಆಗ ಪಕ್ಷದ ಎಲ್ಲ ನಾಯಕರು ಸೇರಿ ರಾಜ್ಯ ಪ್ರವಾಸ ಕೈಗೊಳ್ಳಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next