Advertisement

ಕರಾವಳಿ ಅಭಿವೃದ್ಧಿ ವಿಷನ್‌ ಗ್ರೂಪ್‌ ರಚನೆ

11:33 PM May 06, 2021 | Team Udayavani |

ಬೆಂಗಳೂರು: ರಾಜ್ಯದ  ಕಡಲ ತೀರದ ಸಮಗ್ರ ಅಭಿವೃದ್ಧಿ ಜತೆಗೆ ಹೂಡಿಕೆ ಆಕರ್ಷಿಸಿ ಆರ್ಥಿಕ, ವಾಣಿಜ್ಯ ಚಟುವಟಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಸರಕಾರ  “ಕರಾವಳಿ ಅಭಿವೃದ್ಧಿ ವಿಷನ್‌ ಗ್ರೂಪ್‌’ ರಚಿಸಿದೆ.

Advertisement

ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ (ಎಫ್ಐಸಿಸಿಐ) ಕರ್ನಾಟಕ ಘಟಕದ ಅಧ್ಯಕ್ಷ ಉಲ್ಲಾಸ್‌ ಕಾಮತ್‌ ಅವರ ಅಧ್ಯಕ್ಷತೆಯಲ್ಲಿ  ಈ ಗ್ರೂಪ್‌ ರಚನೆಯಾಗಿದೆ. ಕೆಸಿಸಿಐ ಅಧ್ಯಕ್ಷ ಐಸಾಕ್‌ ವಾಸ್‌, ವಿಶಾಲ್‌ ಹೆಗ್ಡೆ (ವೈದ್ಯಕೀಯ ಶಿಕ್ಷಣ), ಮಂಜುನಾಥ ಭಂಡಾರಿ (ತಾಂತ್ರಿಕ ಶಿಕ್ಷಣ), ಪ್ರಕಾಶ್‌ ಕಾಲಾºವಿ (ಗೋಡಂಬಿ ಕೈಗಾರಿಕೆ), ಗೌರವ್‌ ಹೆಗ್ಡೆ (ಎಂಎಸ್‌ಎಂಇ), ಎನ್‌ಎಂಪಿಟಿ ಸಹಾಯಕ ನಿರ್ದೇಶಕ (ಸಂಶೋಧನೆ) ಪ್ರಂಜಾಲ್‌ ಘಾಟೆ, ಎಂಆರ್‌ಪಿಎಲ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ (ಹಣಕಾಸು) ಯೋಗೀಶ್‌ ನಾಯಕ್‌, ಮೀನುಗಾರಿಕೆ ಕಾಲೇಜಿನ ಡೀನ್‌ ಡಾ| ಎ.ಸೆಂಥಿಲ್‌ ವೇಲ್‌, ಅಭಯ್‌ ಹಂಜುರಾ (ಸಮುದ್ರ ಮೀನು ಖಾದ್ಯ), ಕ್ಯಾ| ಜಾನ್‌ ಪ್ರಸಾದ್‌ ಮಿನೇಜೆಸ್‌ (ಮೆರಟೈಮ್‌), ವತಿಕಾ ಪೈ (ಪ್ರವಾಸೋದ್ಯಮ ಮತ್ತು ಆತಿಥ್ಯ), ಜಿತೇಂದ್ರ ಎಸ್‌. ಕೊಠಾರಿ (ರಿಯಲ್‌ ಎಸ್ಟೇಟ್‌), ಜಿ. ನಂದಗೋಪಾಲ್‌ ಶೆಣೈ (ಕನ್ಸಲ್ಟಂಟ್‌), ಪ್ರದೀಪ್‌ ಪೈ (ಎಫ್ಎಂಸಿಜಿ), ಗಿರಿಧರ್‌ ಕಾಮತ್‌ (ಚಾರ್ಟರ್ಡ್‌ ಅಕೌಂಟೆಂಟ್‌) ಅವರು ಸದಸ್ಯರಾಗಿದ್ದು, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರಲಿದ್ದಾರೆ.

“ಫಿಕ್ಕಿ’ ಕಳೆದ ಮಾರ್ಚ್‌ನಲ್ಲಿ ಮಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ಸಚಿವ ಜಗದೀಶ್‌ ಶೆಟ್ಟರ್‌ ಅವರಿಗೆ  “ಕರಾವಳಿ ಅಭಿವೃದ್ಧಿ ವಿಷನ್‌ ವರದಿ 2030′ ಸಿದ್ಧಪಡಿಸಲು ವಿಷನ್‌ ಗ್ರೂಪ್‌ ರಚಿಸುವಂತೆ ಮನವಿ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next