Advertisement

ಅರಂತೋಡು: ಆಕಸ್ಮಿಕವಾಗಿ ಹೊಳೆಗೆ ಬಿದ್ದು ಪಾರೆಸ್ಟ್ ವಾಚರ್ ಸಾವು

12:24 PM Nov 09, 2022 | Team Udayavani |

ಅರಂತೋಡು: ತೊಡಿಕಾನ ಸಮೀಪದ ಕೊಡಗು ಜಿಲ್ಲೆಗೆ ಸೇರಿದ ಪಾರೆಸ್ಟ್ ವಾಚರ್ ಆಕಸ್ಮಿಕವಾಗಿ ಹೊಳೆಗೆ  ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಮಂಗಳವಾರ  ಸಂಜೆ ನಡೆದಿದೆ.

Advertisement

ಮೃತಪಟ್ಟ ಫಾರೆಸ್ಟ್ ವಾಚರ್  ಚಿನ್ನಪ್ಪ (58 ) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಮಳಲಿ ಮಸೀದಿಗೆ ಸಂಬಂಧಿಸಿದ ವ್ಯಾಜ್ಯ ವಿಚಾರಣೆಗೆ ಕೋರ್ಟ್‌ ಅಸ್ತು

ಕೊಡಗು ಅರಣ್ಯ ಇಲಾಖೆಯಿಂದ  ಭೂಮಿಯ ಸರ್ವೆಗೆ ಹೋದ ಸಂದರ್ಭ ತೊಡಿಕಾನ ಸಮೀಪದ ಮಾವಿನಕಟ್ಟೆ ನರುವೋಳು ಮೊಟ್ಟೆ ಎಂಬಲ್ಲಿ ಹೊಳೆ ಬದಿಯಲ್ಲಿ ನೀರು ಕುಡಿಯಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಮೃತ ದೇಹ ಹೊಳೆಯಲ್ಲಿದ್ದು ಪೊಲೀಸರು ಮತ್ತು ಮನೆಯವರು ಬಂದ ಬಳಿಕ ತೆಗೆಯಲಾಗುವುದೆಂದು ತಿಳಿದು ಬಂದಿದೆ.

ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯ ಬಳಿಕ ತಿಳಿದು ಬರಬೇಕಾಗಿದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next