Advertisement

ಶಂಕರನಾರಾಯಣ ಅರಣ್ಯ ಇಲಾಖೆ: ನೀರಿಗಾಗಿ ಅರಣ್ಯ ಸ್ತಬ್ಧಚಿತ್ರ ಸಂಚಾರ

08:40 AM Jul 26, 2017 | Team Udayavani |

ಕುಂದಾಪುರ: ಕರ್ನಾಟಕ ಸರಕಾರದ ಅರಣ್ಯ ಇಲಾಖೆಯ ಈ ಸಾಲಿನಲ್ಲಿ ನೀರಿಗಾಗಿ ಅರಣ್ಯ ಎನ್ನುವ ಘೋಷಣಾ ವಾಕ್ಯದೊಂದಿಗೆ ರಾಜ್ಯಾದ್ಯಂತ  ವನಮಹೋತ್ಸವ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. 

Advertisement

ಈ ನಿಟ್ಟಿನಲ್ಲಿ   ಕಾಡು ಹಾಗೂ ವನ್ಯ ಜೀವಿಗಳ ಸ್ತಬ್ಧ ಚಿತ್ರದ ವಾಹನವು ಕುಂದಾಪುರ ವಿಭಾಗದ ಶಂಕರನಾರಾಯಣ ವಲಯದ ವ್ಯಾಪ್ತಿ ಪ್ರವೇಶಿಸಿದ್ದು, ಈ ವ್ಯಾಪ್ತಿಯ 28 ಗ್ರಾಮಗಳಲ್ಲಿ ಈ ಸ್ತಬ್ಧ ಚಿತ್ರದ ವಾಹನವು ಶಾಲಾ-ಕಾಲೇಜು ಪರಿಸರದಲ್ಲಿ  ಸಂಚರಿಸಿತು.

ಕಾಡು ಹಾಗೂ ವನ್ಯ ಜೀವಿಗಳ ಈ ಸ್ತಬ್ಧ ಚಿತ್ರದ ವಾಹನದ ನೇತೃತ್ವವನ್ನು ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಎ.ಎ ಗೋಪಾಲ್‌ ಹಾಗೂ ಉಪ ವಲಯ ಅರಣ್ಯಾಧಿಕಾರಿಗಳಾದ ಹರೀಶ ಕೆ, ಮಂಜು ಗಾಣಿಗ ಹಾಗೂ ವನ ರಕ್ಷಕರುಗಳಾದ ಗುರುರಾಜ್‌, ರವಿ, ಆನಂದ ಬಳೆಗಾರ್‌, ಶ್ರೀಕಾಂತ್‌, ಶಿವು ಹಾಗೂ ಗ್ರಾಮ ಅರಣ್ಯ ಸಮಿತಿಯ ಕಾರ್ಯನಿರ್ವಹಣಾ ಸದಸ್ಯ ಚಿಟ್ಟೆ ರಾಜಗೋಪಾಲ ಹೆಗ್ಡೆ ವಹಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next