Advertisement

ಕಾಡಾನೆ ದಾಳಿಗೆ ಸಾಕಾನೆ ಬಲಿ

06:45 AM Nov 16, 2018 | Team Udayavani |

ಕಾರವಾರ: ಕಾಡಾನೆ ದಾಳಿಗೆ ಅರಣ್ಯ ಇಲಾಖೆ ಸಾಕಿದ್ದ ಸಫಾರಿ ಆನೆಯೊಂದು ಮೃತಪಟ್ಟ ಘಟನೆ ಜೋಯಿಡಾ ತಾಲೂಕಿನ ಫಣಸೋಲಿ ಅರಣ್ಯ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ನಡೆದಿದೆ. 

Advertisement

ಪ್ರವಾಸಿಗರ ಸಫಾರಿಗೆ ಬಳಸುತ್ತಿದ್ದ ಮೂರು ಆನೆಗಳ ಪೈಕಿ ರಾಜೇಶ್‌ (57) ಮೇಲೆ ಎರಡು ಕಾಡಾನೆಗಳು ಬುಧವಾರ ಮಧ್ಯಾಹ್ನ ದಾಳಿ ಮಾಡಿದ್ದವು.

ಕಾಡಾನೆಗಳ ದಾಳಿಯಿಂದ ಸಾಕಾನೆ ತೀವ್ರ ಗಾಯಗೊಂಡಿತ್ತು. ಶಿವಮೊಗ್ಗದ ಆನೆ ತರಬೇತಿ ಶಿಬಿರ ಸಕ್ರೆಬೈಲ್‌ನಿಂದ ಪಶು ವೈದ್ಯರು ಬಂದು ಚಿಕಿತ್ಸೆ ನೀಡಿದರಾದರೂ ಫಲಕಾರಿಯಾಗಲಿಲ್ಲ. ತಡರಾತ್ರಿ ರಾಜೇಶ ಕೊನೆಯುಸಿರೆಳೆಯಿತು. ಗುರುವಾರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಫಣಸೋಲಿ ಅರಣ್ಯ ಭಾಗದಲ್ಲಿ ಆನೆಗಳ ಮಧ್ಯೆ ಸಂಘರ್ಷ ನಡೆದದ್ದು ಇದೇ ಮೊದಲು. ದಶಕಗಳ ಹಿಂದೆ ವಿದ್ಯುತ್‌ ತಂತಿಗೆ ಸಿಲುಕಿ ಆನೆಯೊಂದು ಪ್ರಾಣ ಬಿಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next