Advertisement

ನಿತ್ಯಾನಂದ ಆಶ್ರಮದಿಂದ ವಿದೇಶಿ ಪ್ರಜೆ ನಾಪತ್ತೆ

01:51 PM Jul 12, 2021 | Team Udayavani |

ರಾಮನಗರ: ಬಿಡದಿ ಬಳಿಯ ನಿತ್ಯಾನಂದ ಸ್ವಾಮಿ ಧ್ಯಾನಪೀಠದಿಂದ ಮಲೇಷ್ಯಾ ಪ್ರಜೆ ಕ್ರಿಸ್ಟನ್‌ ಭಾಸ್ಕರನ್‌ (23) ಎಂಬ ವಿದೇಶಿ ಪ್ರಜೆ ನಾಪತ್ತೆಯಾಗಿದ್ದಾನೆ ಎಂಬ ದೂರು ಬಿಡದಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

Advertisement

ಧ್ಯಾನಪೀಠದಲ್ಲೇ ವಾಸವಾಗಿರುವ ನಾಪತ್ತೆಯಾಗಿರವ ‌ ವಿದೇಶಿ ಪ್ರಜೆಯ ತಾಯಿ ಪುಷ್ಪಾ ರಾಣಿ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ. ಪಾಸ್‌ಪೋರ್ಟ್‌ಸಮೇತ ನಾಪತ್ತೆಯಾಗಿರುವ ತಮ್ಮ ಮಗನನ್ನು ಹುಡುಕಿಕೊಡುವಂತೆ ಅವರು ಪೊಲೀಸ ರನ್ನು ಕೋರಿದ್ದಾರೆ. ಮಾನಸಿಕ ಅಸ್ವಸ್ಥನಂತಾಗಿದ್ದ ತಮ್ಮ ಮಗನನ್ನು 8 ವರ್ಷಗಳ ಹಿಂದೆ ಚಿಕಿತ್ಸೆಗಾಗಿ ಮಲೇಷ್ಯಾದಿಂದ ಕರೆತಂದು ಬಿಡದಿಯ ಧ್ಯಾನಪೀಠದ ಆಶ್ರಮದಲ್ಲಿ ನೆಲೆಸಿದ್ದಾಗಿ. ಕಳೆದ ಜುಲೈ 9ರ ಬೆಳಗ್ಗೆ 11 ಗಂಟೆ ಸಮಯದಲ್ಲಿ ಶೌಚಾಲಯಕ್ಕೆ ಹೋಗಿ ಬರುವುದಾಗಿ ತೆರಳಿದ ಕ್ರಿಸ್ಟನ್‌ ಭಾಸ್ಕರ‌ನ್‌ ವಾಪಸ್‌ ಕೊಠಡಿಗೆ ವಾಪಸ್‌ ಬಂದಿಲ್ಲ ಎಂದು ಪುಷ್ಪಾರಾಣಿ ತಿಳಿಸಿದ್ದಾರೆ.

ಪೊಲೀಸರಿಗೆ ದೂರು ಕೊಡುವ ಮುನ್ನ ಆಶ್ರಮದ ಎಲ್ಲಾಕಡೆ ಹುಡುಕಿ ರುವುದಾಗಿ, ಆತನ ಲಾಕರ್‌ನಲ್ಲಿದ್ದ ಪಾಸ್‌ ಪೋರ್ಟ್‌ ಕಾಣೆಯಾ ಗಿದೆ. ತಮ್ಮ ಪುತ್ರ ತಕ್ಷಣವೇ ಕೋಪಗೊಳ್ಳುವುದು, ಎದು ರಿಗಿರುವ ವ್ಯಕ್ತಿಗಳ ಮೇಲೆ ಕೈಗೆ ಸಿಕ್ಕ ವಸ್ತುಗ ಳನ್ನು ಎಸೆಯುವುದು, ಸಿಕ್ಕ ವಸ್ತುಗಳನ್ನು ಒಡೆದು ಹಾಕುತ್ತಾನೆ ಎಂದು ಹೇಳಿಕೊಂಡಿ ದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾಗಿರುವ ‌ ವ್ಯಕ್ತಿಯ ಹುಡು ಕಾಟ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next