Advertisement

ನಿವೃತ್ತಿ ವೇತನ ಪರಿಷ್ಕರಣೆಗೆ ಒತ್ತಾಯ

04:17 PM Dec 16, 2017 | Team Udayavani |

ಬೆಂಗಳೂರು: ಭಾರತೀಯ ರಿಸರ್ವ್‌ ಬ್ಯಾಂಕ್‌ನ ನಿವೃತ್ತ ನೌಕರರು ಸಂಕಷ್ಟದಲ್ಲಿದ್ದು,ಆರ್‌ಬಿಐ ಕೂಡಲೇ ನಿವೃತ್ತ ನೌಕರರ ಪಿಂಚಣಿ  ಪರಿಷ್ಕರಣೆಗೆ ಮುಂದಾಗಬೇಕು ಎಂದು ಭಾರತೀಯ ರಿಸರ್ವ್‌ಬ್ಯಾಂಕ್‌ ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಕೆ.ವಿ.ಪದ್ಮನಾಭನ್‌  ಆಗ್ರಹಿಸಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Advertisement

ಕೇಂದ್ರ ಸರ್ಕಾರ 7ನೇ ವೇತನ ಆಯೋಗದ ಶಿಫಾರಸುಗಳ  ಪ್ರಕಾರ ತನ್ನ 55 ಲಕ್ಷ ಪಿಂಚಣಿದಾರರ ಪಿಂಚಣಿಯನ್ನು ಪರಿಷ್ಕರಿಸಿ 85 ಸಾವಿರ ಕೋಟಿ ರೂ. ವ್ಯಯಮಾಡಿದೆ. ಲಾಭದಲ್ಲಿರುವ ರಿಸರ್ವ್‌ ಬ್ಯಾಂಕ್‌  26 ಸಾವಿರ ನೌಕರರಿಗೆ ನ್ಯಾಯಯುತ ಪಿಂಚಣಿ ಪರಿಷ್ಕರಣೆ ನಿರಾಕರಿಸಿದೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next