Advertisement

ರೈತರಿಂದ 10 ಕ್ವಿಂಟಲ್‌ ಹೆಸರು ಖರೀದಿಗೆ ಒತ್ತಾಯ

09:38 AM Oct 06, 2018 | Team Udayavani |

ಹುಬ್ಬಳ್ಳಿ: ಈ ಮೊದಲು ನಿಗದಿಪಡಿಸಿದ್ದ 10 ಕ್ವಿಂಟಲ್‌ ಪ್ರಮಾಣದ ಹೆಸರು ಕಾಳನ್ನು ರಾಜ್ಯ ಸರಕಾರ ಪ್ರತಿ ರೈತರಿಂದ ಬೆಂಬಲ ಬೆಲೆಯಡಿ ಕೂಡಲೇ ಖರೀದಿಸಲು ಮುಂದಾಗಬೇಕೆಂದು ಸಂಸದ ಪ್ರಹ್ಲಾದ ಜೋಶಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರನ್ನು ಒತ್ತಾಯಿಸಿದ್ದಾರೆ.

Advertisement

ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿರುವ ಅವರು, ರಾಜ್ಯದ 9 ಜಿಲ್ಲೆಗಳಲ್ಲಿ ಬೆಳೆದ ಹೆಸರನ್ನು ಬೆಂಬಲ ಬೆಲೆಯಡಿ ಖರೀದಿಸಲು ಕೇಂದ್ರ ಸರಕಾರ ಅನುಮತಿ ನೀಡಿದೆ. ರಾಜ್ಯ ಸರಕಾರ ದ್ವಂದ್ವ ನಿಲುವಿನ ಅಂಕಿ-ಸಂಖ್ಯೆಗಳ ಕಾರಣದಿಂದ ಖರೀದಿ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗಿತ್ತು. ರಾಜ್ಯದ ಮಂತ್ರಿಗಳು, ಸಂಸದರು, ಶಾಸಕರ ನಿಯೋಗ ಕೇಂದ್ರ ಸರಕಾರದ ಕೃಷಿ ಮಂತ್ರಿಗಳನ್ನು ಭೇಟಿಯಾಗಿ ಹೆಸರು ಖರೀದಿ ಪ್ರಮಾಣ ಹೆಚ್ಚಿಸುವಂತೆ ಕೋರಿದ್ದರು. ಅವರ ಅಧಿಕಾರ ವ್ಯಾಪ್ತಿಗೆ ಬರುವ ಗರಿಷ್ಠ ಪ್ರಮಾಣ ಅಂದರೆ 36 ಸಾವಿರ ಮೆಟ್ರಿಕ್‌ ಟನ್‌ ಖರೀದಿಗೆ ಅವಕಾಶ ನೀಡಿದ್ದಾರೆ. ಈ ಪ್ರಮಾಣದಲ್ಲಿ ಖರೀದಿಸಿ ಇನ್ನು ಹೆಚ್ಚಿನ ಪ್ರಮಾಣಕ್ಕೆ ಬೇಡಿಕೆ ಸಲ್ಲಿಸಿದಲ್ಲಿ ಅದಕ್ಕೂ ಒಪ್ಪಿಗೆ ನೀಡುವುದಾಗಿ ಕೇಂದ್ರ ಸರಕಾರ ತಿಳಿಸಿದೆ. ಆದರೂ ರಾಜ್ಯ ಸರಕಾರ ಯಾಕೆ ಕಾಲಹರಣ ಮಾಡುತ್ತಿದೆ ಹಾಗೂ ಖರೀದಿ ಪ್ರಮಾಣದಲ್ಲಿ ಇಳಿಕೆ ಮಾಡಲಾಗುತ್ತಿದೆ ಎಂದು ಜೋಶಿ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next