Advertisement

ಮೊದಲ ಬಾರಿ ರಸ್ತೆ ಮೇಲೆ ನಮಾಜ್‌ ನಡೆದಿಲ್ಲ: ಯೋಗಿ ಆದಿತ್ಯನಾಥ

09:31 PM May 23, 2022 | Team Udayavani |

ಲಕ್ನೋ: “ಇದೇ ಮೊದಲನೇ ಬಾರಿಗೆ ಉತ್ತರ ಪ್ರದೇಶದಲ್ಲಿ ರಸ್ತೆಗಳ ಮೇಲೆ ಈದ್‌ ನಮಾಜ್‌ ನಡೆದಿಲ್ಲ’ ಹೀಗೆಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.

Advertisement

ಸೋಮವಾರ ಆರ್‌ಎಸ್‌ಎಸ್‌ನ ನಿಯತಕಾಲಿಕೆಗಳಾದ “ಪಾಂಚಜನ್ಯ’ ಮತ್ತು “ಆರ್ಗನೈಸರ್‌’ನ 75ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಭಾಗವಹಿಸಿದ ಅವರು ಈ ಮಾತನ್ನಾಡಿದ್ದಾರೆ.

ಇದನ್ನೂ ಓದಿ:ರಾಗಿ ಖರೀದಿ ಟೋಕನ್ ನೀಡುವಲ್ಲಿ ತಾರತಮ್ಯ : ಆಕ್ರೋಶಿತ ರೈತರಿಂದ ಹೆದ್ದಾರಿ ತಡೆ

“2012-17ರ ಅವಧಿಯಲ್ಲಿ ರಾಜ್ಯದಲ್ಲಿ 700ಕ್ಕೂ ಅಧಿಕ ಗಲಭೆಗಳಾಗಿವೆ. ಅದರ ನಂತರ ಒಂದೂ ಗಲಭೆಯಾಗಿಲ್ಲ. ಮೊದಲನೇ ಬಾರಿಗೆ ಈದ್‌ನ ನಮಾಜ್‌ ಕೂಡ ರಸ್ತೆ ಮೇಲೆ ನಡೆದಿಲ್ಲ. ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ರಾಮನವಮಿ ದಿನ ಹೊಡೆದಾಟವಾದರೂ ನಮ್ಮಲ್ಲಿ ಆಗಿಲ್ಲ’ ಎಂದು ಹೇಳಿದ್ದಾರೆ ಯೋಗಿ.

Advertisement

Udayavani is now on Telegram. Click here to join our channel and stay updated with the latest news.

Next