Advertisement

ರೇಬಿಸ್‌ ಗೆ ನಾಟಿ ಔಷಧ ರಾಮಬಾಣ ; 5,000 ಜನರಿಗೆ ಚಿಕಿತ್ಸೆ

04:40 AM Jun 02, 2018 | Karthik A |

ಆಲಂಕಾರು: ಹುಚ್ಚುನಾಯಿ ಕಚ್ಚಿದರೆ ರೇಬಿಸ್‌ ರೋಗದ ಸಾಧ್ಯತೆ ಹೆಚ್ಚು. ಅದರಿಂದ ಪಾರಾಗಲು ರೇಬಿಸ್‌ ನಿರೋಧಕ ಚುಚ್ಚುಮದ್ದಿನ ಮೊರೆಹೋಗುತ್ತಾರೆ. ಇದರ ಮಧ್ಯೆ ಪುತ್ತೂರು ತಾಲೂಕು ಆಲಂಕಾರು ಗ್ರಾಮದ ಕೇಪುಳು ನಿವಾಸಿ ಅಣ್ಣಿ ಪೂಜಾರಿ ಎಂಬ ಪಂಡಿತರು 37 ವರ್ಷಗಳಿಂದ ಗಿಡಮೂಲಿಕೆಗಳನ್ನು ಬಳಸಿ ಔಷಧ ನೀಡುತ್ತಿದ್ದಾರೆ. ಈ ಔಷಧವನ್ನು ಒಂದು ಸಲ ತೆಗೆದುಕೊಂಡರೆ, ರೇಬಿಸ್‌ ವೈರಾಣು ನಿವಾರಣೆಯಾಗುತ್ತದೆ ಎಂದು ಇವರಿಂದ ಚಿಕಿತ್ಸೆ ಪಡೆದ ಅನೇಕರು ಹೇಳಿದ್ದಾರೆ.

Advertisement


ತಮ್ಮ ತಾಯಿಯ ತಾಯಿಯಿಂದ (ಅಜ್ಜಿ) ಈ ಔಷಧ ಕ್ರಮ ಕಲಿತ ಅಣ್ಣಿ ಪೂಜಾರಿ (66) ಈ ತನಕ 5 ಸಾವಿರಕ್ಕೂ ಅಧಿಕ ಜನರಿಗೆ ಹುಚ್ಚು ನಾಯಿ ಕಡಿತಕ್ಕೆ ಔಷಧ ಕೊಟ್ಟಿದ್ದಾರೆ. ಮನುಷ್ಯರಿಗೆ ಮಾತ್ರವಲ್ಲದೆ, ಜಾನುವಾರು, ನಾಯಿ, ಕೋಳಿ, ಸಾಕು ಹಂದಿಗಳಿಗೂ ನಾಟಿ ಪದ್ಧತಿಯ ಔಷಧ ನೀಡಿ, ಗುಣಪಡಿಸಿದ್ದಾರೆ. ಅವರ ಈ ಸಾಧನೆಗೆ ಆಲಂಕಾರು ಸಿ.ಎ. ಬ್ಯಾಂಕ್‌, ಮೂರ್ತೆದಾರರ ಸೇವಾ ಸಹಕಾರಿ ಸಂಘ, ಬಿಲ್ಲವ ಸಂಘ ಮುಂತಾದವು ಅವರನ್ನು ಸಮ್ಮಾನಿಸಿ, ಗೌರವಿಸಿವೆ. ಹುಚ್ಚು ನಾಯಿ ಕಚ್ಚಿದ ಮೇಲೆ ಮನುಷ್ಯರಿಗಾದರೆ 42ನೇ ದಿನ, ಪ್ರಾಣಿಗಳಿಗೆ ಕೇವಲ 20 ದಿನಗಳಲ್ಲಿ ರೇಬಿಸ್‌ ರೋಗ ಶುರುವಾಗುತ್ತದೆ. ಉಲ್ಬಣಿಸಿದ ಮೇಲೆ ಯಾವ ಚಿಕಿತ್ಸೆಯೂ ಫ‌ಲ ನೀಡುವುದಿಲ್ಲ. ಆಮೇಲೆ ಮೂರು ದಿನಗಳಷ್ಟೇ ಆಯಸ್ಸು.

ಅಣ್ಣಿ ಪೂಜಾರಿ ಅವರು ಕೊಡುವ ಔಷಧಕ್ಕೆ ದರ ನಿಗದಿಯಿಲ್ಲ. ಚಿಕಿತ್ಸೆ ಪಡೆದವರು ತಮಗೆ ತೋಚಿದಷ್ಟು ಹಣ ಕೊಡುತ್ತಾರೆ. ಹಲವು ಜನರಿಗೆ ಉಚಿತವಾಗಿ ಔಷಧ ವಿತರಿಸಿದ್ದೂ ಇದೆ. ಈ ಔಷಧಕ್ಕೆ ಯಾವುದೇ ಪಥ್ಯವಿಲ್ಲ. ಆದರೆ. ಚಿಕಿತ್ಸೆ ಪಡೆದ ದಿನ ಮದ್ಯ ಸೇವಿಸುವಂತಿಲ್ಲ. ರಾತ್ರಿ ಊಟ ಮಾಡಿದ ಮೇಲೆ ಔಷಧ ಸೇವಿಸಿ ನಿದ್ರಿಸಬೇಕು. ಬೆಳಗ್ಗೆ ತಲೆಯ ಮೇಲೆ ತಣ್ಣೀರು ಸ್ನಾನ ಮಾಡಿ, ತಣ್ಣೀರನ್ನೇ ಕುಡಿಯಬೇಕು. ಆಮೇಲೆ ದೈನಂದಿನ ಕೆಲಸಗಳಿಗೆ ಹೋಗಲು ಯಾವುದೇ ಅಡ್ಡಿಯಿಲ್ಲ.

ಶೀಘ್ರ ಗುಣಮುಖ
ಕೇಪುಳು ಅಣ್ಣಿ ಪೂಜಾರಿ ಅವರ ಸಹೋದರಿ ರಾಮಕುಂಜದಲ್ಲಿ ಔಷಧ ನೀಡುತ್ತಾರೆ. ಈಗ ಎಲ್ಲ ಕಡೆಗಳಲ್ಲಿ ರಬ್ಬರ್‌ ಕೃಷಿಯಿಂದಾಗಿ ಗಿಡ ಮೂಲಿಕೆಗಳು ನಾಶವಾಗಿವೆ. ಗಿಡಮೂಲಿಕೆಗಳಿಗಾಗಿ ಉಪ್ಪಿನಂಗಡಿ, ಕಡಬ, ಸುಬ್ರಹ್ಮಣ್ಯದ ವರೆಗೆ ಅಲೆದಾಡಬೇಕಾಗುತ್ತದೆ ಎನ್ನುತ್ತಾರೆ, ಅಣ್ಣಿ ಪೂಜಾರಿ (ಮೊ. 9880140030). ರೇಬಿಸ್‌ಗೆ ಮಾತ್ರವಲ್ಲದೆ ವಿಷಕಾರಿ ಜೇಡ ಕಚ್ಚಿದರೂ ಮೂರು ದಿನಗಳ ಔಷಧ ನೀಡಿ, ಗುಣಪಡಿಸುತ್ತಾರೆ. ಮೂಲವ್ಯಾಧಿಗೂ ಚಿಕಿತ್ಸೆ ನೀಡುತ್ತಾರೆ. 

— ಸದಾನಂದ ಆಲಂಕಾರು

Advertisement
Advertisement

Udayavani is now on Telegram. Click here to join our channel and stay updated with the latest news.

Next