Advertisement

Manjunath Bhandary; ಸಂಪುಟದಿಂದ ಕೈಬಿಡುವ ಭಯಕ್ಕೆ ಎಚ್‌ಡಿಕೆ ಭಾಗಿ

11:24 PM Aug 04, 2024 | Team Udayavani |

ಬೆಂಗಳೂರು: ಕೇಂದ್ರ ಸಚಿವ ಪದವಿಯಿಂದ ಕಿತ್ತು ಹಾಕುವುದಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬೆದರಿಕೆ ಹಾಕಿರಬೇಕು. ಸಿಕ್ಕಿರುವ ಒಂದು ಸಚಿವ ಸ್ಥಾನ ಕೈಬಿಟ್ಟು ಹೋಗಬಹುದು ಎಂಬ ಭಯದಲ್ಲಿ ಕುಮಾರಸ್ವಾಮಿ ಅವರು ದಿಢೀರ್‌ ನಿಲುವು ಬದಲಿಸಿ ಬಿಜೆಪಿಯ ಪಾದಯಾತ್ರೆಗೆ ಕೈಜೋಡಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಆರೋಪಿಸಿದ್ದಾರೆ.

Advertisement

ಕುಮಾರಸ್ವಾಮಿ ಕುಟುಂಬದವರು, ಚುನಾವಣೆ ಗೆಲ್ಲುವ ತನಕ ನಾವು ಮಣ್ಣಿನ ಮಕ್ಕಳು, ನೀರಿನ ಮಕ್ಕಳು ಎಂದು ಹೇಳುತ್ತಿದ್ದರು. ಮೇಕೆದಾಟು ಮತ್ತು ಕಾವೇರಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದ್ದ ಕುಮಾರಸ್ವಾಮಿ, ಈಗ ನಾನೆಲ್ಲಿ ಹೇಳಿದ್ದೆ ‘ ಎನ್ನುತ್ತಿದ್ದಾರೆ. ಇಂತಹ ದ್ವಂದ್ವ ನಿಲುವಿನ ವ್ಯಕ್ತಿಯನ್ನು ನಂಬುವುದು ಹೇಗೆ? ರಾಜ್ಯದ ಜನರು ಇಂತಹ ಸಚಿವರಿಂದ ರಾಜ್ಯದ ಜನ ಏನು ತಾನೇ ನಿರೀಕ್ಷೆ ಮಾಡಬಹುದು ಎಂದು ಭಂಡಾರಿ ಕೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next