Advertisement

ಕಲಾವಿದರಿಗೆ ಆಹಾರ ಕಿಟ್‌

11:00 AM Apr 29, 2020 | mahesh |

ಬೆಂಗಳೂರು: ರಾಜಾಜಿನಗರದ ರಂಗೋತ್ರಿ ಮಕ್ಕಳ ರಂಗ ಶಾಲೆ ವತಿಯಿಂದ ರಂಗಭೂಮಿ ಸೇರಿದಂತೆ ವಿವಿಧ ಕ್ಷೇತ್ರದ ಕಲಾವಿದರುಗಳಿಗೆ ಮಂಗಳವಾರ ಆಹಾರ ಧಾನ್ಯದ
ಕಿಟ್‌ ನೀಡಲಾಯಿತು. ರವೀಂದ್ರ ಕಲಾಕ್ಷೇತ್ರದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರು, ಕಲಾವಿದರುಗಳಿಗೆ ಆಹಾರ ಧಾನ್ಯದ ಕಿಟ್‌ ವಿತರಿಸಿದರು. ಈಗಾಗಲೇ ಸರ್ಕಾರ ಕಲಾವಿದರಿಗೆ 2 ಸಾವಿರ ರೂ. ನೀಡಲು ಮುಂದಾಗಿದೆ. ಆರ್ಥಿಕ ನೆರವು ನೀಡುವ ಸಲುವಾಗಿ ಕಲಾವಿದರ ಪಟ್ಟಿ ಸಿದಟಛಿಪಡಿಸಲು ಇಲಾಖೆಯ
ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು. ಇದೇ ವೇಳೆ ಗಂಗೋತ್ರಿ ಮಕ್ಕಳ ಶಾಲೆಯ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸುಮಾರು 300 ಕಲಾವಿದರು ಆಹಾರ ಧಾನ್ಯದ ಕಿಟ್‌ ಪಡೆದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ, ರಂಗೋತ್ರಿ ಸಂಸ್ಥೆಯ ಸಂಸ್ಥಾಪಕ ಕುಮಾರ್‌ ಕೆ.ಎಚ್‌.ಸೇರಿದಂತೆ ಮತ್ತಿತರರು ಉಪಸ್ಥಿತಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next