Advertisement

Food: ಎಗ್‌ರೈಸ್‌ಗೆ ಟೇಸ್ಟಿಂಗ್ ಪೌಡರ್, ಕೃತಕ ಬಣ್ಣ ಬಳಸದಿರಿ: ಅಧಿಕಾರಿಗಳ ಸೂಚನೆ

06:18 PM Aug 24, 2024 | Team Udayavani |

ಮುಧೋಳ  : ನಗರದ ವಿವಿಧೆಡೆ ಬೀದಿ ಬದಿಗಳಲ್ಲಿ ವ್ಯಾಪಾರ  ನಡೆಸುತ್ತಿದ್ದ ಎಗ್ ರೈಸ್ ಅಂಗಡಿಗಳ ಮೇಲೆ ದಾಳಿ ನಡೆಸಿದ ನಗರಸಭೆ ಅಧಿಕಾರಿಗಳು ಆಹಾರಕ್ಕೆ ಬಳಸುತ್ತಿದ್ದ ಟೇಸ್ಟಿಂಗ್ ಪೌಡರ್ ಹಾಗೂ ಕೃತಕ ಬಣ್ಣಗಳ ವಶಪಡಿಸಿಕೊಂಡರು.

Advertisement

ನಗರದ ಬಸವೇಶ್ವರ ವೃತ್ತ, ಮೇವಿನ ಬಜಾರ ಹಾಗೂ ಉತ್ತೂರ ಗೇಟ್ ಗಳಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಆಹಾರ ಪದಾರ್ಥಗಳಿಗೆ ಟೇಸ್ಟಿಂಗ್‌ ಪೌಡರ್‌, ಕೃತಕ ಬಣ್ಣಗಳ ಬಳಸದಂತೆ ಅಂಗಡಿ ಮಾಲೀಕರಿಗೆ ಸೂಚನೆ ನೀಡಿದರು.

ಆಹಾರ ಸುರಕ್ಷಾ ಅಧಿಕಾರಿ ಸುರೇಶ‌ ಹೊಸಮನಿ, ಕಿರಿಯ ಆರೋಗ್ಯ ನಿರೀಕ್ಷಕ, ಸ್ಯಾನಿಟರಿ ಸೂಪರ್‌ ವೈಸರ್ ಜಯಂವತ ಹಿರಲಕ್ಕಿ, ವಾಹನ ಚಾಲಕ ಮಂಜುನಾಥ ದೊಡಮನಿ ದಾಳಿಯಲ್ಲಿ‌ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next