Advertisement

Bengaluru: ನೀರಿನ ಟ್ಯಾಂಕರ್‌ ಹರಿದು ಫುಡ್‌ ಡೆಲಿವರಿ ಬಾಯ್‌ ದುರ್ಮರಣ

09:28 AM Sep 02, 2024 | Team Udayavani |

ಬೆಂಗಳೂರು: ನೀರಿನ ಟ್ಯಾಂಕರ್‌ ಹರಿದು ಫ‌ುಡ್‌ ಡೆಲಿವರಿ ಬಾಯ್‌ ಮೃತಪಟ್ಟಿರುವ ಘಟನೆ ವೈಟ್‌ಫೀಲ್ಡ್‌ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ನಲ್ಲೂರು ನಿವಾಸಿ ಮಧು (22) ಮೃ ಬೈಕ್‌ ಸವಾರ. ಫುಡ್‌ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ ಮಧು, ಆ.29 ಫುಡ್‌ ಡೆಲಿವರಿ ಮಾಡಲು ನಲ್ಲೂರು ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದಾಗ ದುರ್ಘ‌ಟನೆ ನಡೆದಿದೆ.

ಆ.29ರಂದು ಸಂಜೆ 4ಗಂಟೆಗೆ ಮಧು ಬೈಕ್‌ನಲ್ಲಿ ನಲ್ಲೂರು ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದ. ಆಗ ಪಕ್ಕದಲ್ಲೇ ನೀರಿನ ಟ್ಯಾಂಕರ್‌ ಬಂದಿದೆ. ಅದನ್ನು ಹಿಂದಿಕ್ಕುವ ಭರದಲ್ಲಿ ರಸ್ತೆ ಬದಿ ಹೋಗುತ್ತಿದ್ದ ಯುವಕನಿಗೆ ಡಿಕ್ಕಿ ಹೊಡೆದು, ಕೆಳಗೆ ಬಿದ್ದಿದ್ದಾನೆ. ಅದೇ ವೇಳೆ ನೀರಿನ ಟ್ಯಾಂಕರ್‌ ಚಕ್ರಗಳು ಮಧು ಮೇಲೆ ಹರಿದು ಗಂಭೀರವಾಗಿ ಗಾಯಗೊಂಡಿದ್ದ. ಕೂಡಲೇ ಸ್ಥಳೀಯರು ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾನೆ. ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ಬೈಕ್‌ ಸವಾರ ಮಧುನ ನಿರ್ಲಕ್ಷ್ಯವೇ ದುರ್ಘ‌ಟನೆಗೆ ಕಾರಣ ಎಂಬುದು ಗೊತ್ತಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next