Advertisement

ನೇಕಾರರಿಗೆ ಆಹಾರ ಪದಾರ್ಥಗಳ ನೆರವು

01:34 PM May 03, 2020 | Suhan S |

ಕೆರೂರ: ಲಾಕ್‌ಡೌನ್‌ನಿಂದ ನೇಕಾರಿಕೆ ಉದ್ದಿಮೆ ಸಂಕಷ್ಟದಲ್ಲಿದ್ದು, ಸ್ಥಳೀಯ ದೇವಾಂಗ ಬಾಂಧವರಿಗೆ ನೆರವಾಗಲು ವಿಜಯಪುರದ ಉದ್ಯಮಿ ಪ್ರವೀಣಕುಮಾರ ಜೈನ್‌ ಹಾಗೂ ಆನಂದ ಹುಲಮನಿ ದಿನಸಿ ಪದಾರ್ಥಗಳ ಕಿಟ್‌ ವಿತರಿಸಿದರು.

Advertisement

ಹೊಸಪೇಟೆಯ ಬನಶಂಕರಿ ದೇವಸ್ಥಾನದಲ್ಲಿ ದೇವಾಂಗ ಸಮಾಜದ ಜನತೆಗೆ ಸಾಂಕೇತಿಕವಾಗಿ ದಿನಸಿ ಕಿಟ್‌ ಗಳನ್ನು ವಿತರಿಸಿದ ಉದ್ಯಮಿಗಳು, ಸರ್ಕಾರದ ಸೂಚನೆಯಂತೆ ಎಲ್ಲರೂ ಕಡ್ಡಾಯವಾಗಿ ಮಾಸ್ಕ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.ಆರ್ಥಿಕವಾಗಿ ದುರ್ಬಲಗೊಂಡ ಕುಟುಂಬಗಳಿಗೆ ಮತ್ತೆ ನೆರವು ಒದಗಿಸುವುದಾಗಿ ಪ್ರವೀಣಕುಮಾರ, ಆನಂದ ಭರವಸೆ ನೀಡಿದರು.

ದೇವಾಂಗಮಠದ ರುದ್ರಮುನಿ ಸ್ವಾಮೀಜಿ, ಸಮಾಜದ ಅಧ್ಯಕ್ಷ ಸಂಕಣ್ಣ ಹೊಸಮನಿ, ದಶರಥಪ್ಪ ಅಂಕದ, ರಾಚಣ್ಣ ಕುದರಿ, ಚಿದಾನಂದ ಅಂಕದ, ತಿಪ್ಪಣ್ಣ ಹೆಬ್ಬಳ್ಳಿ, ರಿಕ್ಕಪ್ಪ ಹುಲಮನಿ, ಗುಂಡಣ್ಣ ಬೋರಣ್ಣವರ, ನವೀನ ಹೆಬ್ಬಳ್ಳಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next