Advertisement

ಆಹಾರ ತ್ಯಜಿಸಿದ ಒಂಟೆ!

01:00 AM Mar 05, 2019 | Harsha Rao |

ಅಹಮದಾಬಾದ್‌: ಗುಜರಾತ್‌ನ ಜಕೌ ಪೊಲೀಸ್‌ ಠಾಣೆಗೆ ಸೇರಿದ ಒಂಟೆಯೊಂದು ತನ್ನ ಮೇಲ್ವಿಚಾರಕ, ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಹೃದಯಾ ಘಾತದಿಂದ ಮೃತಪಟ್ಟ ಬಳಿಕ ಆಹಾರ – ನೀರು ಸೇವಿಸುವುದನ್ನೇ ಬಿಟ್ಟಿದೆ ಎಂದು ಪೊಲೀ ಸರು ತಿಳಿಸಿದ್ದಾರೆ. ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಶಿವರಾಜ್‌ ಗಧ್ವಿ ಪಿಂಗ್ಲೆàಶ್ವರ ದಲ್ಲಿ ಪಹರೆ ಕಾÃಚರಣೆಯಲ್ಲಿ ಪಾಲ್ಗೊಂಡಿದ್ದರು. ಬೆಳಗ್ಗೆ 9.30ಕ್ಕೆ ಅವರು ಒಂಟೆಗೆ ಆಹಾರ ನೀಡಿದ ಕೆಲವೇ ಕ್ಷಣಗಳಲ್ಲಿ ಹೃದಯಾಘಾತಕ್ಕೆ ಒಳಗಾದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಅವರು ಅಸುನೀಗಿದರು. ಅವರ ಜತೆಯಿದ್ದ ಒಂಟೆ ಆಗಿನಿಂದ ಆಹಾರ ಸೇವಿಸುವುದನ್ನು ಬಿಟ್ಟಿದ್ದು, ನೀರನ್ನೂ ಕುಡಿಯುತ್ತಿಲ್ಲ. ಅದು ಚೇತರಿಸಿ ಕೊಳ್ಳಲು ನಾವು ಸಹಾಯ ಮಾಡುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next