Advertisement
ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಬಡಗೇರಿ ಸುಕ್ರಜ್ಜಿ ಮನೆಗೆ ಬುಡಕಟ್ಟು ಸಮುದಾಯ ಮತ್ತು ಅಲ್ಲಿಯ ಪರಿಸರದ ಕುರಿತು ಅಧ್ಯಯನಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಂಗಳೂರಿಗೆ ಆಗಮಿಸಿದ ಜರ್ಮನ್ ದೇಶದ ಮೆಕ್ಸಿಮಿಲನ್ ನೇರಲಿಂಗ ಆಸ್ಟ್ರಿಯಾದ ವೇಲೆರೀಯಾ ಸ್ಟ್ರೋಬ್ ವಿದ್ಯಾರ್ಥಿಗಳೊಂದಿಗೆ ಅತಿಥಿಗಳಾಗಿ ಆಗಮಿಸಿ ಸುಕ್ರಿ ಗೌಡರ ಜಾನಪದ ಭಂಡಾರಕ್ಕೆ ಮಾರು ಹೊಗಿದ್ದಾರೆ.
Related Articles
Advertisement
ಜರ್ಮನ್ ತಂಡದೊಂದಿಗೆ ಬರುತ್ತೇವೆ : ಹಾಲಕ್ಕಿ ಸಮುದಾಯದವರ ಸಾಂಪ್ರದಾಯಿಕ ಆಚಾರ ಣ ವಿಚಾರ, ಹಾಡು, ಕುಣಿತ, ಉಡುಗೆಗಳಿಗೆ ಮಾರುಹೊದ ವಿದೇಶಿ ಪ್ರಜೆಗಳು ಮತ್ತು ಅಧ್ಯಯನ ಕೇಂದ್ರದವರು ಸುಕ್ರಿ ಗೌಡರಿಗೆ ಸನ್ಮಾನಿಸಿ ಗೌರವ ನೀಡಿದ್ದಾರೆ. ಮುಂದಿನ ದಿನದಲ್ಲಿ ಜರ್ಮನ ದೇಶದಿಂದಲೇ ನಮ್ಮ ತಂಡ ಕರೆದುಕೊಂಡು ಇಲ್ಲಿಗೆ ಬರುವುದಾಗಿ ಹೇಳಿ ಹೋಗಿದ್ದಾರೆ.
ಮಂಗಳೂರಿನ ಮಕ್ಕಳೊಂದಿಗೆ ಎರಡು ದಿನ ಹೊರದೇಶದ ವರುಣ ನಮ್ಮ ಮನೆಯಲ್ಲಿ ಇದ್ದರು. ಇಲ್ಲೆ ಮಲಗಿ ನಮ್ಮ ಊಟವನ್ನೆ ಮಾಡಿದ್ದಾರೆ. ನಾವು ಕೂಡ ಅವರಿಗೆ ಜಾನಪದ ಹಾಡನ್ನ ಹೇಳಿ ನೃತ್ಯ ಮಾಡುವುದರ ಮೂಲಕ ಮನರಂಜನೆ ನೀಡಿದ್ದೆವು. –ಸುಕ್ರಿ ಗೌಡ ಪದ್ಮಶ್ರೀ ಪುರಸ್ಕೃತೆ
–ಅರುಣ ಶೆಟ್ಟಿ