Advertisement
ನೂಲಿಚಂದಯ್ಯ ಜಾನಪದ ಕಲಾ ಮೇಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ತಾಲೂಕಿನ ಲಕ್ಕುಂಡಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಜರುಗಿದ ರಾಜ್ಯ ಮಟ್ಟದ ಜಾನಪದ ಕಲಾ ಉತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
Related Articles
Advertisement
ಗ್ರಾಪಂ ಅಧ್ಯಕ್ಷೆ ಶ್ರೇಯಾ ಕಟಿಗ್ಗಾರ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ., ಗ್ರಾಪಂ ಉಪಾಧ್ಯಕ್ಷ ಪೀರಸಾಬ ನದಾಫ, ನೀಲಕಂಠ ಮರಡಿ, ಚನ್ನಬಸಪ್ಪ ಹಡಗಲಿ, ಮಹೇಶಕುಮಾರ ಮುಸ್ಕಿನಭಾವಿ, ನಿಂಗಪ್ಪ ಮಣ್ಣೂರು, ದತ್ತಾತ್ರೇಯ ಜೋಶಿ, ಪ್ರದೀಪ ನವಲಗುಂದ, ಮರಿಯಪ್ಪ ವಡ್ಡರ, ಸಮೀರಸಾಬ ನದಾಫ ಹಾಗೂ ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು. ಬಸವರಾಜ ಮುಳ್ಳಾಳ, ಸ್ವಾಗತಿಸಿ, ಎಂ.ವಿ. ಗಡ್ಡಿ ನಿರೂಪಿಸಿ, ಶಿವು ಭಜಂತ್ರಿ ವಂದಿಸಿದರು.
ಮನ ಸೆಳೆದ ಜೋಗುತಿ ನೃತ್ಯ-ಕೋಲಾಟ: ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡಿದ ಕೋತಬಾಳ ಗ್ರಾಮದ ಶಂಕ್ರಣ್ಣ ಸಂಕಣ್ಣವರ ನೇತೃತ್ವದ ಅರುಣೋದಯ ಕಲಾ ತಂಡದ ಜೋಗುತಿ ಮತ್ತು ದೀಪ ನೃತ್ಯ, ಕುರ್ತುಕೋಟಿ ವಿರೂಪಾಕ್ಷಪ್ಪ ಗುರನವರ ಕಲಾ ತಂಡದ ಕೋಲಾಟ ಜನಮನ ಸೆಳೆಯಿತು.
ಅಸುಂಡಿಯ ಪುಟ್ಟರಾಜ ಕಲಾ ತಂಡದ ಲಂಬಾಣಿ ನೃತ್ಯ, ಎನ್.ಎಚ್.ಗುಡ್ಡದ ಅವರ ರಂಗ ಗೀತೆಗಳು, ಸಾವಿತ್ರಿ ಲಮಾಣಿ ಅವರ ಸುಗಮ ಸಂಗೀತ, ಗೌಡಪ್ಪ ಬೊಮ್ಮಪ್ಪನವರ ಜನಪದ ಗೀತೆ, ಲಕ್ಕುಂಡಿ ಜ್ಯೋತಿ ಕಮದೋಡ ಅವರ ಭರತ ನಾಟ್ಯ, ನಿಂಗಪ್ಪ ಗುಡ್ಡದ ಅವರ ಡೊಳ್ಳಿನ ಪದ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಅಗಮಿಸಿದ್ದ ಜಾನಪದ ಕಲಾವಿದರ ಸಂಗೀತ ಸಾವಿರಾರು ಜನರ ಮನ ತಣಿಸಿತು.