Advertisement

ಅಲೆಗಳ ಅಬ್ಬರದಲ್ಲಿ ಏರಿಳಿತ, ಎಚ್ಚರಿಕೆ

10:39 PM May 03, 2019 | Sriram |

ಕುಂದಾಪುರ: ಒಡಿಶಾ ರಾಜ್ಯದಲ್ಲಿರುವ ಫೋನಿ ಚಂಡಮಾರುತ ಪ್ರಭಾವ ದಕ್ಷಿಣ ಕರಾವಳಿ ಭಾಗದಲ್ಲಿ ಅಷ್ಟೇನೂ ಪರಿಣಾಮ ಬೀರದಿದ್ದರೂ, ಸಮುದ್ರದಲ್ಲಿ ಅಲೆಗಳ ಅಬ್ಬರ ಶುಕ್ರವಾರ ಎಂದಿಗಿಂತ ಸಲ್ಪ ಮಟ್ಟಿಗೆ ಹೆಚ್ಚಾಗಿಯೇ ಇತ್ತು.

Advertisement

ಮರವಂತೆ, ತ್ರಾಸಿ, ಬೈಂದೂರಿನ ಸೋಮೇಶ್ವರ ಕಡಲ ಆಳದಲ್ಲಿ ಅಲೆಗಳ ಅಬ್ಬರ ಜೋರಾಗಿಯೇ ಇದ್ದಾಗಿ ಕಂಡು ಬಂತು.

ಈಗಾಗಲೇ ಒಡಿಶಾದ ಪುರಿ ಸಹಿತ ಹಲವೆಡೆ ಚಂಡಮಾರುತದ ಪರಿಣಾಮ ಉಂಟಾಗಿದ್ದು, ಆದರೆ ಇದು ಈಶಾನ್ಯ ದಿಕ್ಕಿನತ್ತ ಸಾಗುತ್ತಿರುವುದರಿಂದ ದಕ್ಷಿಣ ಕರಾವಳಿ ಭಾಗಕ್ಕೆ ಯಾವುದೇ ಆತಂಕ ಇಲ್ಲ ಎನ್ನಲಾಗಿದ್ದರೂ, ಕರಾವಳಿಯ ಉಭಯ ಜಿಲ್ಲೆಗಳಲ್ಲಿನ ಮೀನುಗಾರರಿಗೆ ಎಚ್ಚರಿಕೆಯಿಂದಿರಲು ಇಲಾಖೆ ಮುನ್ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next