Advertisement

ಲಾಕ್ ಡೌನ್ ಸಮಯದಲ್ಲಿ ಹೂವಿನ ಬೆಳೆ ಹಾನಿ: ಮನನೊಂದ ರೈತ ಆತ್ಮಹತ್ಯೆ

05:48 PM Jun 30, 2020 | keerthan |

ಬೆಳಗಾವಿ: ಲಾಕ್ ಡೌನ್ ಹೂವಿನ ಬೆಳೆ ಹಾನಿಯಾಗಿದ್ದರಿಂದ ಮನನೊಂದು ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹಲಗಾ ಗ್ರಾಮದಲ್ಲಿ ನಡೆದಿದೆ.

Advertisement

ಹಲಗಾ ಗ್ರಾಮದ ಮಾರುತಿ ಭೀಮಾ ಬಿಳಗುಜಿ (63) ಆತ್ಮಹತ್ಯೆ ಮಾಡಿಕೊಂಡ ರೈತ. ಲಾಕ್ ಡೌನ್ ಕ್ಕಿಂತ ಮುಂಚೆ ಹೊಲದಲ್ಲಿ ಹೂ ಬೆಳೆದಿದ್ದನು. ಲಾಕ್ ಡೌನ್ ನಲ್ಲಿ ಹೂ ಮಾರಾಟವಾಗದೇ ಸಂಪೂರ್ಣ ಹಾನಿಯಾಗಿತ್ತು. ಹೂ ಬೆಳೆ ತೆಗೆದು ಬೇರೆ ಬೆಳೆ ಬೆಳೆಯಬೇಕು ಎಂದುಕೊಂಡಿದ್ದನು. ಅಪಾರ ಪ್ರಮಾಣದಲ್ಲಿ ಹಾನಿ ಆಗಿದ್ದರಿಂದ ನೊಂದುಕೊಂಡಿದ್ದನು.

ಹೊಲದಲ್ಲಿಯ ಮನೆಯ ಎದುರು ಇರುವ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ರೈತ ಮಾರುತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಹಿರೇಬಾಗೇವಾಡಿ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.

ಈ 15 ದಿನಗಳ ಅವಧಿಯಲ್ಲಿ ಒಟ್ಟು ಮೂವರು ರೈತರು ಬೆಳೆ ಹಾನಿಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಂತಾಗಿದೆ. ತಾಲೂಕಿನಲ್ಲಿ ರೈತರ ಆತ್ಮಹತ್ಯೆ ಹೆಚ್ಚುತ್ತಿರುವುದು ಆತಂಕಕಾರಿ ವಿಷಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next