Advertisement

ಪ್ರವಾಹಕ್ಕೆ ಕೊಚ್ಚಿಹೋದ ವಾಹನ: ಚಾಲಕ ಸಾವು

10:04 AM Aug 09, 2019 | keerthan |

ಧಾರವಾಡ: ಬೆಡ್ತಿಹಳ್ಳದ ರಭಸಕ್ಕೆ ಸಿಲುಕಿ ಟಾಟಾ ಏಸ್ ವಾಹನದಲ್ಲಿನ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

Advertisement

ತಾಲೂಕಿನ ಮುರಕಟ್ಟಿ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ.

ಕಳೆದ ರಾತ್ರಿ ಧಾರವಾಡದಿಂದ ದಾಂಡೇಲಿಗೆ ಈ ವಾಹನ ಸಾಗುತ್ತಿತ್ತು.ಈ ಸಮಯದಲ್ಲಿ ರಸ್ತೆಯಲ್ಲಿ ಪ್ರವಾಹದ ನೀರು ಹರಿಯುತ್ತಿದ್ದು, ಇದರ ರಭಸಕ್ಕೆ ವಾಹನ ಕೊಚ್ಚಿ ಹೋಗಿದೆ. ಇಂದು ಬೆಳಗ್ಗೆ ಗ್ರಾಮಸ್ಥರು ಗಮನಿಸಿದಾಗ ಚಾಲಕ ವಾಹನದಲ್ಲಿ ಮೃತಪಟ್ಟಿರುವ ಬಗ್ಗೆ ತಿಳಿದು ಬಂದಿದೆ.

ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ‌ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next