Advertisement

ಕುಕ್ಕೆ: ಮುಳುಗಿದ ಕುಮಾರಧಾರ ಸ್ನಾನಘಟ್ಟ; ಕ್ಷೇತ್ರಕ್ಕಾಗಮಿಸುವ ಭಕ್ತರಿಗೆ ಸಮಸ್ಯೆಯಿಲ್ಲ

10:16 AM Sep 06, 2019 | Team Udayavani |

ಕುಕ್ಕೆ: ಮಲೆನಾಡು, ಕರಾವಳಿ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ನದಿಗಳು ಮತ್ತೆ ತುಂಬಿ ಹರಿಯುತ್ತಿದೆ. ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತ ಮಳೆ ತೀವ್ರಗೊಂಡಿದ್ದು, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಪವಿತ್ರ ನದಿ ಕುಮಾರಧಾರ ನದಿಯಲ್ಲೂ ನೀರಿನ‌ ಮಟ್ಟ ಏರಿಕೆಯಾಗಿದೆ.

Advertisement

ನದಿ ತುಂಬಿ ಹರಿದು ಭಕ್ತರು ತೀರ್ಥ ಸ್ನಾನ ನೆರವೇರಿಸುವ ಕುಮಾರಧಾರ ಸ್ನಾನ ಘಟ್ಟ ಗುರುವಾರ ಬೆಳಗ್ಗೆ ಮುಳುಗಡೆಗೊಂಡಿದೆ. ಘಟ್ಟ ಹಾಗೂ ಸ್ಥಳೀಯವಾಗಿ ನಿರಂತರ ಮಳೆಯ ಕಾರಣ ನೆರೆ ನೀರು ಹೆಚ್ಚಳವಾಗಿದೆ. ಭಾರಿ ಮಳೆಗೆ ಈ ಭಾಗದ ಇತರೆಡೆಗಳ ನದಿ, ಹಳ್ಳ ತೋಡುಗಳಲ್ಲಿ ಸಹಿತ ನೆರೆ ನೀರು ಹೆಚ್ಚಳವಾಗಿದೆ.

ಕುಮಾರಧಾರ ನದಿಯಲ್ಲಿ ಎಷ್ಟೇ ನೆರೆ ಹರಿದು ಬಂದರೂ ಕ್ಷೇತ್ರಕ್ಕೆ ಆಗಮಿಸುವ ದೂರದ ಊರುಗಳ ಭಕ್ತರಿಗೆ ಯಾವುದೇ ಅಡಚಣೆಯಿಲ್ಲ.ಈ ಹಿಂದೆ ಮಳೆಗಾಲ ಮುಳುಗೇಳುತಿದ್ದ ಕುಮಾರಧಾರ ತಗ್ಗು ಪ್ರದೇಶದ ಸೇತುವೆ ಬದಲಿ ನೂತನ ಸೇತುವೆ ನಿರ್ಮಾಣಗೊಂಡ ಕಾರಣ ಹಲವು ವರ್ಷಗಳ ಸಮಸ್ಯೆ ಪರಿಹಾರ ಕಂಡಿದೆ. ಸದ್ಯಕ್ಕೆ ಸ್ನಾನ ಘಟ್ಟ ಮುಳುಗಡೆ ಮಾತ್ರ ಸಮಸ್ಯೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next