Advertisement

“ಪ್ರವಾಹ ಎದುರಿಸುವ ಕಟ್ಟಡ ನಿರ್ಮಾಣ ಚಿಂತನೆ ನಡೆಯಲಿ’

11:07 PM Feb 07, 2020 | Sriram |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಕಾಏಕಿ ಭಾರೀ ಪ್ರವಾಹಕ್ಕೆ ಕಾರಣ ಏನೆಂಬುದನ್ನು ಅರಿಯುವ ಜತೆಗೆ ಪ್ರವಾಹ ಎದುರಿಸುವ ಕಟ್ಟಡ ನಿರ್ಮಾಣ ಬಗ್ಗೆಯೂ ಚಿಂತನೆ ನಡೆಯಬೇಕು ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಹೇಳಿದರು.

Advertisement

ಸೆಂಟ್ರಲ್‌ ಬಿಲ್ಡಿಂಗ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಮತ್ತು ದ.ಕ. ನಿರ್ಮಿತಿ ಕೇಂದ್ರದ ವತಿಯಿಂದ ದ.ಕ. ಜಿ.ಪಂ. ಮತ್ತು ಮಂಗಳೂರು ಮಹಾನಗರ ಪಾಲಿಕೆ ಸಹಯೋಗದೊಂದಿಗೆ ನಗರದ ಜಿ.ಪಂ. ನೇತ್ರಾವತಿ ಸಭಾಂಗಣದಲ್ಲಿ “ಇನ್ನೋವೇಟಿವ್‌ ಟೆಕ್ನಾಲಜೀಸ್‌ ಫಾರ್‌ ಕನ್‌ಸ್ಟ್ರಕ್ಷನ್‌ ಆಫ್‌ ಡಿಸಾಸ್ಟರ್‌ ರೆಸಿಲಿಯೆಂಟ್‌ ಹ್ಯಾಬಿಟ್ಯಾಟ್‌’ ಎಂಬ ವಿಷಯದ ಕುರಿತು ಶುಕ್ರವಾರದಿಂದ 2 ದಿನಗಳು ನಡೆಯುವ ಕೌಶಾಲಾಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿ.ಪಂ. ಸಿಇಒ ಡಾ| ಸೆಲ್ವಮಣಿ ಆರ್‌., ಮಂಗಳೂರು ಸ್ಮಾರ್ಟ್‌ ಸಿಟಿ ಎಂಡಿ ಮೊಹಮ್ಮದ್‌ ನಜೀರ್‌ ಮುಖ್ಯ ಅತಿಥಿಗಳಾಗಿದ್ದರು. ಸಿಎಸ್‌ಐಆರ್‌ ಮುಖ್ಯ ವಿಜ್ಞಾನಿ ಎಸ್‌.ಕೆ. ನೇಗಿ, ಹಿರಿಯ ವಿಜ್ಞಾನಿ ಡಾ| ಆರ್‌. ಧರ್ಮರಾಜುಲು ಸಂಪನ್ಮೂಲ ವ್ಯಕ್ತಿಗಳಾಗಿದ್ದರು.ಸಲಹೆಗಾರ ಎಚ್‌.ಕೆ. ಜೈನ್‌ ಪ್ರಸ್ತಾವನೆಗೈದರು. ನಿರ್ಮಿತಿ ಕೇಂದ್ರದಕಾ.ನಿ. ನಿರ್ದೇಶಕ ರಾಜೇಂದ್ರ ಸ್ವಾಗತಿಸಿದರು. ಬಳಿಕ ಮನೆ ನಿರ್ಮಾಣಕ್ಕೆ ಆಧುನಿಕ ತಂತ್ರಜ್ಞಾನಗಳು, ಡಿಸಾಸ್ಟರ್‌ ರೆಸಿಸ್ಟೆನ್ಸ್‌ ಬಿಲ್ಡಿಂಗ್ಸ್‌, ಕಾನ್ಸೆಪ್ಟ್ ಆ್ಯಂಡ್‌ ಡಿಸೈನ್‌ ಆಫ್‌ ಕನ್‌ಫೈನ್‌ಡ್‌ ಮ್ಯಾಸನರಿ ಬಿಲ್ಡಿಂಗ್ಸ್‌ ಎಂಬ ವಿಷಯದ ಕಾರ್ಯಾಗಾರ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next