Advertisement

ಕೆರೆಯಲ್ಲೇ ಧ್ವಜಾರೋಹಣ

11:45 PM Aug 15, 2019 | Team Udayavani |

ಕೆ.ಆರ್‌.ಪೇಟೆ: ಮಂಡ್ಯ ಜಿಲ್ಲೆ ಕೆ.ಆರ್‌. ಸಪೇಟೆಯ ದೇವಿರಮ್ಮಣ್ಣಿ ಕೆರೆಯ ಮಧ್ಯ ಭಾಗದಲ್ಲಿ ಮೀನುಗಾರರು ಧ್ವಜಾರೋಹಣ ಮಾಡಿ ಸ್ವಾತಂತ್ರ್ಯದಿನ ಆಚರಿಸಿದರು. ಈ ವೇಳೆ ಮಾತನಾಡಿದ ತಾಲೂಕು ಮೀನುಗಾರರ ಸಂಘದ ಸದಸ್ಯ ಯೋಗೇಶ್‌, ನಾವು ಕೆಲಸ ಮಾಡುವ ಸ್ಥಳವೇ ಶ್ರೇಷ್ಠ ಸ್ಥಳವಾಗಿದ್ದು ಅಲ್ಲಿಯೇ ದೇಶಾಭಿಮಾನ ತೋರಿಸಬೇಕು ಎಂದರು.

Advertisement

ಕಳೆದ 17 ವರ್ಷಗಳಿಂದ ದೇವಿರಮ್ಮಣ್ಣಿ ಕೆರೆಯಲ್ಲಿಯೇ ಕನ್ನಡ ರಾಜ್ಯೋತ್ಸವ ಸೇರಿ ರಾಷ್ಟ್ರೀಯ ಹಬ್ಬಗಳ ದಿನಾಚರಣೆಗಳಂದು ಧ್ವಜಾರೋಹಣ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸುತ್ತಿದ್ದೇವೆ. ನಮಗೆ ಕೆರೆಗಳೇ ಪ್ರಪಂಚ, ಅವುಗಳೇ ನಮ್ಮ ಜೀವಾಳ, ಬದುಕು. ನಮ್ಮ ಪ್ರಪಂಚದಲ್ಲೇ ನಾವುಗಳು ಹಬ್ಬಗಳನ್ನು ಆಚರಿಸಿಕೊಂಡು ಸಂಭ್ರಮಿಸುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next