Advertisement
ಅಶೋಕ ನಗರದ ನಿವಾಸಿ ಹನುಮಂತಪ್ಪ (38)ನ ಕೊಲೆ ಪ್ರಕರಣದ ಸಂಬಂಧ ಆತನ ಪತ್ನಿಯರಾದ ರೇಣುಕಾ (30), ಸುಧಾ (26), ಕಾಯಿಪೇಟೆ ಕರ್ನಾಟಕ ಎಲೆಕ್ಟ್ರಿಕಲ್ ಅಂಗಡಿ ಮಾಲೀಕ ದಿನೇಶ್ (28), ಕೆಲಸಗಾರ ಮಾಲತೇಶ್ (26), ಮಂಜುನಾಥ(19)ರನ್ನು ಬಂಧಿಸಲಾಗಿದೆ ಎಂದು ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಭೀಮಾಶಂಕರ್ ಎಸ್. ಗುಳೇದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
Related Articles
Advertisement
ಕಳೆದ ಏ.20ರಂದು ಮಧ್ಯರಾತ್ರಿ 2 ಗಂಟೆ ವೇಳೆಗೆ ದಿನೇಶ್, ತನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಾಲತೇಶ್ ಮತ್ತು ಮಂಜುನಾಥ್ರ ಸಹಾಯದೊಂದಿಗೆ ಹನುಮಂತಪ್ಪನನ್ನು ನಗರದ ಬಾತಿ ಬಳಿ ಇರುವ ಆಯುರ್ವೇದ ಕಾಲೇಜು ಬಳಿ ಕರೆದೊಯ್ದು ಮಚ್ಚಿನಿಂದ ಹಲ್ಲೆ ಮಾಡಿ ಕೊಲೆಗೈದು, ಆತನ ಶವವನ್ನು ಬಾತಿ ಕೆರೆಯಲ್ಲಿ ಎಸೆದಿದ್ದರೆಂದು ಅವರು ತಿಳಿಸಿದರು.
ಬಾತಿ ಕೆರೆಯಲ್ಲಿ ಅಪರಿಚಿತ ಶವ ಪತ್ತೆಯಾದ ನಂತರ ತನಿಖೆ ನಡೆಸಿದಾಗ ಆತ ಅಶೋಕ ನಗರ ನಿವಾಸಿ ಎಂಬುದು ಬೆಳಕಿಗೆ ಬಂತು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಗಾಂಧಿನಗರ ಪೊಲೀಸರು ಡಿಎಸ್ಪಿ ಅಶೋಕ್ ಕುಮಾರ್, ಸಿಪಿಐ ಉಮೇಶ್ರ, ಪಿಎಸ್ಐ ಗುರುಲಿಂಗಯ್ಯ ತಮ್ಮ ಸಿಬ್ಬಂದಿಯೊಂದಿಗೆ ಕೊಲೆ ಪ್ರಕರಣ ಭೇದಿಸಿದ್ದಾರೆ.
ಘಟನೆ ನಡೆದ ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಅಧಿಕಾರಿ, ಸಿಬ್ಬಂದಿಗೆ ಬಹುಮಾನ ನೀಡುವುದಾಗಿ ಎಸ್ಪಿ ತಿಳಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಿಗೋಡಿ, ಡಿಎಸ್ಪಿ ಅಶೋಕ್ಕುಮಾರ್, ಸಿಪಿಐ ಉಮೇಶ್, ಪಿಎಸ್ಐ ಗುರುಲಿಂಗಯ್ಯ ಸುದ್ದಿಗೋಷ್ಠಿಯಲ್ಲಿದ್ದರು.