Advertisement

ಬಸ್‌ 3 ಪಲ್ಟಿಯಾಗಿ ಐವರ ದುರ್ಮರಣ

11:18 PM Oct 30, 2019 | Lakshmi GovindaRaju |

ಕೊರಟಗೆರೆ: ಜಟ್ಟಿ ಅಗ್ರಹಾರ ಹೆದ್ದಾರಿ ಬಳಿ ಬುಧವಾರ ಬೆಳಗ್ಗೆ ಎದುರಿಗೆ ಬಂದ ಆಟೋಗೆ ಡಿಕ್ಕಿಯಾಗುವುದನ್ನು ತಪ್ಪಿಸುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್‌ 3 ಪಲ್ಟಿಯಾಗಿ ಸ್ಥಳದಲ್ಲೇ 5 ಮಂದಿ ಮೃತಪಟ್ಟಿದ್ದು, 24 ಮಂದಿ ಗಂಭೀರ ಗಾಯಗೊಂಡಿದ್ದಾರೆ.

Advertisement

ತುಮಕೂರು ತಾಲೂಕು ಗೇರಹಳ್ಳಿಯ ಇಮ್ರಾನ್‌ (18), ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯ ಅಕ್ರಂಪಾಷ (28), ಕೊರಟಗೆರೆಯ ಮೊಹಮ್ಮದ್‌ ಸಾಜದ್‌ (19), ಮಧುಗಿರಿ ತಾಲೂಕಿನ ಪುಲಮಾಚಿಹಳ್ಳಿಯ ಶಿವಕುಮಾರ್‌ (27), ಕೊಡಗೇನಹಳ್ಳಿ ನಿವಾಸಿ ಶ್ರೀನಿವಾಸ್‌ (40) ಮೃತ ವ್ಯಕ್ತಿಗಳು. ಗಾಯಗೊಂಡವರನ್ನು ಕೊರಟಗೆರೆ ಮತ್ತು ತುಮಕೂರು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next