Advertisement

ವ್ಯಾನ್‌ ಅಡಿಮೇಲಾಗಿ ಬಿದ್ದು ಐವರ ದಾರುಣ ಸಾವು; 28 ಮಂದಿಗೆ ಗಾಯ

11:33 AM May 27, 2017 | udayavani editorial |

ಕೊಯಮುತ್ತೂರು : ನೀಲಗಿರಿ ಜಿಲ್ಲೆಯಲ್ಲಿನ ಕೋತಗಿರಿ ಸಮಿಪ ವ್ಯಾನ್‌ ಮಗುಚಿ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಮೃತಪಟ್ಟು ಇತರ 28 ಮಂದಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ಉದಕಮಂಡಲಕ್ಕೆ ರಜಾ ಕಾಲದ ಪ್ರವಾಸಕ್ಕೆ ಹೋಗಿ ವೆಲ್ಲೂರು ಜಿಲ್ಲೆಯಲ್ಲಿನ ತಮ್ಮ ಊರಿಗೆ ಮರಳುತ್ತಿದ್ದವರು ನತದೃಷ್ಟ ವ್ಯಾನಿನಲ್ಲಿ ಇದ್ದರು. ನಿನ್ನೆ ಶುಕ್ರವಾರ ತಡರಾತ್ರಿ ವ್ಯಾನ್‌ ಸ್ಕಿಡ್‌ ಆಗಿ ಚಾಲಕನ ನಿಯಂತ್ರಣ ತಪ್ಪಿ ಅಡಿಮೇಲಾಗಿ ಮಗುಚಿ ಬಿತ್ತು. ಪರಿಣಾಮವಾಗಿ ವ್ಯಾನಿನಲ್ಲಿದ್ದವರ ಪೈಕಿ ಐವರು ಮೃತಪಟ್ಟರು. 

ಮೃತರನ್ನು ಶಂಕರ 50, ಮಲ್ಲಿಕಾ 69, ಭಾಸ್ಕರನ್‌ 45, ಪನ್ನೀರಸೆಲ್ವಂ 43 ಮತ್ತು ಸರೋಜಾ 44 ಎಂದು ಗುರುತಿಸಲಾಗಿದೆ.
 
ಮೂವರು ಮಕ್ಕಳ ಸಹಿತ ಗಾಯಗೊಂಡ 28 ಮಂದಿಯನ್ನು ಸರಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next