Advertisement

ಸಿಂಗಾಪುರ: ಜಿಎಸ್‌ಟಿ ಮರುಪಾವತಿ ವಂಚನೆ; 5 ಭಾರತೀಯರು ಅರೆಸ್ಟ್‌

12:26 PM Feb 03, 2017 | |

ಸಿಂಗಾಪುರ : ಸರಕು ಮತ್ತು ಸೇವಾ ತೆರಿಗೆಯಡಿ 1,18,300 ಡಾಲರ್‌ ಹಣದ ಅಕ್ರಮ ಮರುಪಾವತಿ ಮಾಡಿಸಿಕೊಂಡ ಅಪರಾಧಕ್ಕಾಗಿ ಐವರು ಭಾರತೀಯರ ವಿರುದ್ಧ ವಂಚನೆಯ ದೋಷಾರೋಪವನ್ನು ಹೊರಿಸಲಾಗಿದೆ.

Advertisement

ದೋಷಾರೋಪಕ್ಕೆ ಗುರಿಯಾಗಿರುವ ಐವರು ಭಾರತೀಯರೆಂದರೆ ಕೋದಂಡರಾಮನ್‌ ಜ್ಞಾನಂ 29, ಕರುಣಾನಿಧಿ ರಾಜೇಶ್‌ 32, ಕರುಣಾನಿಧಿ ಶರವಣನನ್‌ 36, ರಮಯಾನ್‌ ಕಾರ್ತಿಕೇಯನ್‌ 43, ಮತ್ತು ವೈದ್ಯಲಿಂಗಂ ಕರುಣಾನಿಧಿ 63. ಈ ಐವರ ವಿರುದ್ಧ ವಂಚನೆ, ಸಂಚು ಸೇರಿದಂತೆ ವಿವಿಧ ಬಗೆಯ 1,197 ದೋಷಾರೋಪಗಳನ್ನು ಹೊರಿಸಲಾಗಿದೆ.

ಈ ಐವರು ವಂಚಕರನ್ನು ಸಿಂಗಾಪುರದ ಆಂತರಿಕ ಕಂದಾಯ ಪ್ರಾಧಿಕಾರದ ತನಿಖಾಧಿಕಾರಿಗಳು ಬಂಧಿಸಿದರು.

ನಿನ್ನೆ ತಲಾ 50,000 ಡಾಲರ್‌ಗಳನ್ನು ಪಾವತಿಸಿ ಜಾಮೀನು ಪಡೆದಿರುವ ಈ ಐವರು ಈಗಿನ್ನು ಫೆಬ್ರವರಿ 24ರಂದು ಕೋರ್ಟಿಗೆ ಮರಳಲಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next