Advertisement

ತಾಂತ್ರಿಕ ದೋಷದಿಂದ ಸಮುದ್ರದಲ್ಲಿ ಸಿಲುಕಿದ ಮೀನುಗಾರಿಕಾ ಬೋಟ್: ರಕ್ಷಣಾ ಕಾರ್ಯ

09:50 AM Jul 13, 2020 | keerthan |

ಉಳ್ಳಾಲ: ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಬೋಟ್ ಒಂದು ಹಿಂದೆ ಬರುವಾಗ ತಾಂತ್ರಿಕ ದೋಷ ಉಂಟಾಗಿ ಸಮಸ್ಯೆಗೆ ಸಿಲುಕಿದ ಘಟನೆ ಇಲ್ಲಿ ಅಳಿವೆಬಾಗಿಲು ಸಮುದ್ರ ತೀರದಲ್ಲಿ ನಡೆದಿದೆ.

Advertisement

ಇನ್ನೊಂದು ಬೋಟ್ ನಲ್ಲಿ ಹೋಗಿ ಬೋಟ್ ರಿಪೇರಿ ಮಾಡಿ ದಡಕ್ಕೆ ತರಲಾಗಿದೆ. ಉಳ್ಳಾಲ ಕೋಡಿ ಮೂಲದವರಿಗೆ ಸೇರಿದ ಈ ಬೋಟ್ ಎರಡು ದಿನಗಳ ಹಿಂದೆ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಹಿಂದೆ ಬರುವ ಸಮಯದಲ್ಲಿ ಇಂಜಿನ್ ಸಮಸ್ಯೆ ಎದುರಾಗಿದೆ. ಕೂಡಲೇ ಕರಾವಳಿ ರಕ್ಷಣಾ ಪಡೆಗೆ ಮಾಹಿತಿ ಪಡೆಗೆ ನೀಡಲಾಗಿತ್ತು.

ಇಂದು ಮುಂಜಾನೆ ಮಂಜೇಶ್ವರದಿಂದ ಮತ್ತೊಂದು ಬೋಟ್ ನಲ್ಲಿ ಮೀನುಗಾರರು ತೆರಳಿ ಬೋಟ್ ನ್ನು ದಡಕ್ಕೆ ತಂದಿದ್ದಾರೆ. ಕರಾವಳಿ ರಕ್ಷಣಾ ಪಡೆ, ಉಳ್ಳಾಲ ಪೊಲೀಸರು ಸಹಕಾರ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next