Advertisement

ತೂಫಾನ್‌ ನಿರೀಕ್ಷೆಯಲ್ಲಿ ನಾಡದೋಣಿ ಮೀನುಗಾರರು

10:51 AM Jun 17, 2019 | keerthan |

ಕುಂದಾಪುರ/ಮಲ್ಪೆ : ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಇನ್ನೂ ಆರಂಭಗೊಳ್ಳದ ಕಾರಣ ಮತ್ತು ಸಮುದ್ರದಲ್ಲಿ ದೊಡ್ಡ ಮಟ್ಟದ ತೂಫಾನ್‌ ಉಂಟಾಗದ ಪರಿಣಾಮ ಕರಾವಳಿಯೆಲ್ಲೆಡೆ ನಾಡ ದೋಣಿ ಮೀನುಗಾರರು ಇನ್ನೂ ಕಡಲಿಗಿಳಿದಿಲ್ಲ.

Advertisement

ಪ್ರತಿ ವರ್ಷದಂತೆ ಯಾಂತ್ರೀಕೃತ ಮೀನು ಗಾರಿಕೆ ಮೇ 31ಕ್ಕೆ ಕೊನೆಗೊಂಡಿದ್ದು, ಮಳೆಗಾಲದಲ್ಲಿ ನಾಡದೋಣಿ ಮೀನುಗಾರಿಕೆ ಮಾತ್ರ ನಡೆಯುತ್ತದೆ. ಆದರೆ ಅವು ಸಮುದ್ರಕ್ಕೆ ಇಳಿಯಬೇಕಾದರೆ ಮಳೆ ಉತ್ತಮವಾಗಿ ಬಂದು, ದೊಡ್ಡ  ಮಟ್ಟದ ತೂಫಾನ್‌ ಉಂಟಾಗಿ, ಆ ಬಳಿಕ ಕಡಲು ಶಾಂತವಾಗಬೇಕು. ಆದರೆ ಈ ಬಾರಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ತುಸು ವಿಳಂಬವಾಗಿಯೇ ಮುಂಗಾರು ಆರಂಭ ವಾಗಿದೆ. ಇದರ ಪ್ರತಿಕೂಲ ಪರಿಣಾಮ ನಾಡದೋಣಿ ಮೀನುಗಾರಿಕೆಗೂ ತಟ್ಟಿದೆ.

ಮಂಗಳೂರು, ಮಲ್ಪೆ, ಗಂಗೊಳ್ಳಿ, ಹೆಜಮಾಡಿ, ಕೋಡಿ, ಮರವಂತೆ, ಕೊಡೇರಿ, ಶಿರೂರು ಸಹಿತ ಎಲ್ಲ ಕಡೆಗಳ ನಾಡದೋಣಿ ಮೀನುಗಾರರು ತೂಫಾನ್‌ ನಿರೀಕ್ಷೆಯಲ್ಲಿ ದ್ದಾರೆ. ಕುಂದಾಪುರ ತಾಲೂಕಿನಲ್ಲಿಯೇ ಸುಮಾರು 15ರಿಂದ 20 ಸಾವಿರ ನಾಡ ದೋಣಿ ಮೀನುಗಾರರಿದ್ದಾರೆ.

ಕೋಟ್ಯಂತರ ರೂ. ವಹಿವಾಟು
ಮುಂಗಾರಿನಲ್ಲಿ ನಡೆಯುವ ನಾಡ ದೋಣಿ ಮೀನುಗಾರಿಕೆಯಲ್ಲಿ ಸಿಗಡಿ ಸಹಿತ ಇನ್ನಿತರ ಮೀನುಗಳು ಸಿಕ್ಕಿದಲ್ಲಿ ದಿನವೊಂದರ ವಹಿವಾಟು ಕೋ.ರೂ. ಸ್ತರಕ್ಕೇರುತ್ತದೆ. ಈ ಸೀಸನ್‌ನಲ್ಲಿ ನಾಡದೋಣಿಗಳಿಗೆ ಕೋಟ್ಯಂತರ ರೂ. ವಹಿವಾಟು ನಡೆಯುತ್ತದೆ. ವಿಳಂಬವಾದಷ್ಟು ಮೀನುಗಾರರಿಗೆ ನಷ್ಟವೇ ಹೆಚ್ಚು.

ಜು.10ರ ಬಳಿಕ…
ಇನ್ನೂ ಮಳೆ ಬಂದಿಲ್ಲ. ತೂಫಾನ್‌ ಕೂಡ ಕಾಣಿಸಿಲ್ಲ. ಹಾಗಾಗಿ ನಾಡ ದೋಣಿ ಮೀನುಗಾರಿಕೆಯು ಜು.10ರ ಬಳಿಕವಷ್ಟೇ ಆರಂಭವಾಗಬಹುದು. ಕಳೆದ ಬಾರಿಯೂ ಜು. 20ರ ಅನಂತರವಷ್ಟೇ ಆರಂಭ ವಾಗಿತ್ತು ಎಂದು ಗಂಗೊಳ್ಳಿ ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷ ಮಂಜು ಬಿಲ್ಲವ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next