Advertisement

ಮೀನುಗಾರರಿಗೆ ಸರಕು ಸಾಗಾಟ ವಾಹನದಲ್ಲಿ ಸಂಚರಿಸಲು ಅವಕಾಶ‌ ನೀಡಲು ಮನವಿ

11:14 PM Jul 12, 2019 | Sriram |

ಉಡುಪಿ: ಕರಾವಳಿ ಕರ್ನಾಟಕದ ಮೀನುಗಾರರಿಗೆ ಸರಕು ಸಾಗಾಟದ ವಾಹನದಲ್ಲಿ ಸಂಚರಿಸಲು ಅವಕಾಶ ನೀಡಬೇಕು ಎಂದು ದ.ಕ.ಜಿಲ್ಲಾ ಮೊಗವೀರ ಮಹಾಜನ ಸಂಘ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಮನವಿ ನೀಡಿದೆ.


Advertisement

ಮಳೆಗಾಲದ ಸಮಯದಲ್ಲಿ ನಾಡ ದೋಣಿಗಳಲ್ಲಿ ದುಡಿಯುವ ಮೀನುಗಾರರು ಮೀನುಗಾರಿಕಾ ಬಲೆ ಮತ್ತು ಇತರ ಪರಿಕರಗಳೊಂದಿಗೆ ಸರಕು ಸಾಗಾಟದ ಟೆಂಪೋದಲ್ಲಿ ಬಂದರುಗಳಿಗೆ ತೆರಳುವಾಗ ಮತ್ತು ಮಹಿಳೆಯರು ಮೀನು ಮಾರಾಟಕ್ಕೆ ಸಣ್ಣ ಟೆಂಪೋದಲ್ಲಿ ಸಂಚರಿಸುವಾಗ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ. ಮುಂಜಾನೆ ಯಾವುದೇ ಬಸ್ಸಿನ ವ್ಯವಸ್ಥೆ ಇರುವುದಿಲ್ಲ ಮತ್ತು ಮೀನುಗಾರ ಮಹಿಳೆಯರಿಗೆ ಬುಟ್ಟಿಯೊಂದಿಗೆ ಬಸ್ಸುಗಳಲ್ಲಿ ಸಂಚರಿಸಲು ಅವಕಾಶ ನೀಡದ ಕಾರಣ ಸರಕು ಸಾಗಾಟದ ವಾಹನಗಳಲ್ಲಿ ಪ್ರಯಾಣಿಸುವುದು ಅನಿವಾರ್ಯವಾಗಿರುತ್ತದೆ. ಆದ್ದರಿಂದ ಈ ವಾಹನಗಳಲ್ಲಿ ಸಂಚರಿಸಲು ಅವಕಾಶ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ದ.ಕ.ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್‌, ಸಮಿತಿಯ ಸದಸ್ಯರಾದ ಲೀಲಾಧರ ಪಡುಬಿದ್ರಿ, ವಿನಯ ಕರ್ಕೆರ, ರವೀಂದ್ರ ಶ್ರಿಯಾನ್‌, ದಾಸ ಕೋಟ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next