Advertisement

ಪಡುಬಿದ್ರಿ: ಕಣಜದ ಹುಳುಗಳ ದಾಳಿ; ಮೀನುಗಾರ ನೀರಿಗೆ ಬಿದ್ದು ಸಾವು

09:21 PM Dec 15, 2022 | Team Udayavani |

ಪಡುಬಿದ್ರಿ: ನಡಿಪಟ್ಣ ನಿವಾಸಿ ವಾಸುದೇವ ಸಾಲ್ಯಾನ್‌ (65) ಅವರು ಗುರುವಾರ ಸಂಜೆ ಮೀನುಗಾರಿಕೆಗೆಂದು ಬಲೆ ಬೀಸಿ ಸಮುದ್ರದ ಬಳಿ ನಿಂತಿದ್ದಾಗ ಒಮ್ಮೆಲೆ ಕಣಜದ ಹುಳುಗಳ ಗುಂಪು ದಾಳಿ ನಡೆಸಿದೆ. ಪರಿಣಾಮ ಸಮುದ್ರದ ನೀರಿಗೆ ಬಿದ್ದು ಅವರು ಸಾವನ್ನಪ್ಪಿದ್ದಾರೆ.

Advertisement

ಈ ಹುಳುಗಳ ದಿಢೀರ್‌ ದಾಳಿಯಿಂದ ತಪ್ಪಿಸಿಕೊಳ್ಳಲು ಅವರು ಸಮುದ್ರದತ್ತ ಓಡಿ ಹೋಗಿದ್ದರು. ಅದಾಗಲೇ ಕಣಜದ ಹುಳುಗಳು ಮುಖದ ತುಂಬಾ ಕಚ್ಚಿ ಅವರಿಗೆ ಗಂಭೀರವಾಗಿ ಗಾಯಗೊಳಿಸಿದ್ದವು ಎಂದು ಪೊಲೀಸ್‌ ವರದಿ ತಿಳಿಸಿದೆ.

ಎಲ್ಲರೊಂದಿಗೂ ಬೆರೆತು ಅನ್ಯೋನ್ಯವಾಗಿ ಮಾತನಾಡುತ್ತಿದ್ದ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದ ಅವರು ಹಲವಾರು ವರ್ಷಗಳಿಂದ ಕಾಡಿಪಟ್ಣ ಕೈರಂಪಣಿ ಫ‌ಂಡ್‌ನ‌ ಸದಸ್ಯರಾಗಿ ಮೀನುಗಾರಿಕೆ ಕೆಲಸದಲ್ಲಿ ತೊಡಗಿಕೊಂಡಿದ್ದರು. ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next