Advertisement

Ullal ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

12:29 AM Jan 13, 2024 | Team Udayavani |

ಉಳ್ಳಾಲ: ಮೀನುಗಾರಿಕೆ ನಡೆಸುವ ಸಂದರ್ಭದಲ್ಲಿ ಮೀನಿಗೆ ಹಾಕಿದ್ದ ಬಲೆ ಎಳೆಯುವಾಗ ಸಮುದ್ರಕ್ಕೆ ಜಾರಿ ಬಿದ್ದು, ಮೀನುಗಾರರೊಬ್ಬರು ಮೃತಪಟ್ಟಿದ್ದು, ಸಹ ಮೀನುಗಾರರು ಅಳ ಸಮುದ್ರದಲ್ಲಿ ಮುಳುಗಿದ್ದ ಮೀನುಗಾರನನ್ನು ಮೇಲಕ್ಕೆ ಎತ್ತುವ ಸಂದರ್ಭದಲ್ಲೇ ಅವರು ಮೃತಪಟ್ಟಿರುವುದು ತಿಳಿದು ಬಂದಿದೆ.

Advertisement

ಮೊಗವೀರಪಟ್ಣ ನಿವಾಸಿ ತುಳಸೀರಾಮ್‌ (62) ಮೃತಪಟ್ಟ ಮೀನುಗಾರ. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಘಟನೆಯ ವಿವರ : ಮೊಗವಿಇರಪಟ್ಣ ನಿವಾಸಿ ಕಿರನ್‌ ಪುತ್ರನ್‌ ಅವರಿಗೆ ಸೇರಿದ್ದ “ವಾಸವಿ’ ಪರ್ಸಿನ್‌ ಬೋಟ್‌ನಲ್ಲಿ ತುಳಸಿರಾಮ್‌ ಸೇರಿದಂತೆ 30 ಜನ ಮೀನುಗಾರರು ಗುರುವಾರ ರಾತ್ರಿ ಮೀನುಗಾರಿಕೆಗೆ ತೆರಳಿದ್ದರು. ಸಮುದ್ರ ನಡುವೆ ಬಲೆ ಹಾಕಿ ಮಲಗಿದ್ದ ಅವರು ಬೆಳಗ್ಗೆ ಬಲೆಯನ್ನು ಎಳೆಯುತ್ತಿದ್ದಾಗ ತುಳಸೀರಾಮ್‌ ಆಯ ತಪ್ಪಿ ಸಮುದ್ರಕ್ಕೆ ಬಿದ್ದಿದ್ದಾರೆ. ತತ್‌ಕ್ಷಣ ಸಹ ಮೀನುಗಾರರಾದ ಜಿತೇಂದ್ರ ಬಂಗೇರ ಮತ್ತು ಪ್ರಥ್ವಿನ್‌ ಸಮುದ್ರಕ್ಕೆ ಹಾರಿ ರಕ್ಷಿಸಲು ಯತ್ನಿಸಿದರೂ ಅದಾಗಲೇ ಮುಳುಗಿದ್ದ ತುಳಸೀರಾಮ್‌ ಸಮುದ್ರದಲ್ಲೇ ಮೃತಪಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next