Advertisement

ಜಪ್ತಿ ನೋಟಿಸ್‌ ಬೆನ್ನಲ್ಲೇ 70 ಲಕ್ಷದ ಲಾಟರಿ ಗೆದ್ದ ಮೀನು ವ್ಯಾಪಾರಿ!

12:58 AM Oct 15, 2022 | Team Udayavani |

ಕೊಲ್ಲಂ: ಅದೃಷ್ಟ ಅಂದರೆ ಇದು… ಸಾಲ ಮರುಪಾವತಿ ಮಾಡದ್ದಕ್ಕೆ ನಿಮ್ಮ ಮನೆಯನ್ನು ಜಪ್ತಿ ಮಾಡಲಾಗುವುದು ಎಂಬ ನೋಟಿಸ್‌ ಬಂದ ಕೆಲವೇ ಗಂಟೆಗಳಲ್ಲಿ ಕೇರಳದ ಮೀನು ವ್ಯಾಪಾರಿಯೊಬ್ಬರಿಗೆ 70 ಲಕ್ಷ ರೂ.ಗಳ ಲಾಟರಿ ಹೊಡೆದಿದೆ!

Advertisement

ಕೇರಳ ಸರಕಾರದ ಅಕ್ಷಯ ಲಾಟರಿ ಮೀನು ವ್ಯಾಪಾರಿ ಪೂಕುಂಜು ಅವರ ಬದುಕನ್ನೇ ಬದಲಿಸಿಬಿಟ್ಟಿದೆ. ಪೂಕುಂಜು ಮನೆಗಾಗಿ ಬ್ಯಾಂಕ್‌ನಿಂದ 9 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ಮರುಪಾವತಿ ಮಾಡದ್ದಕ್ಕೆ ಬ್ಯಾಂಕ್‌ನಿಂದ ನೋಟಿಸ್‌ ಬಂದಿತ್ತು. ಏನು ಮಾಡುವುದೆಂದು ತೋಚದೇ ತಲೆ ಮೇಲೆ ಕೈಹೊತ್ತು ಕುಳಿತಿದ್ದೆವು. ಅಷ್ಟರಲ್ಲಿ, ಲಾಟರಿ ವಿಜೇತರ ಹೆಸರು ಘೋಷಣೆಯಾಯಿತು.

ಗಂಟೆಗಳ ಹಿಂದೆ ಕುತ್ತಿಗೆಯವರೆಗೆ ಸಾಲ ಹೊಂದಿದ್ದ ನಾವು ಕ್ಷಣಮಾತ್ರದಲ್ಲಿ ಲಕ್ಷಾಧೀಶರಾದೆವು ಎಂದು ಖುಷಿಪಟ್ಟಿದೆ ಪೂಕುಂಜು ಕುಟುಂಬ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next