Advertisement

ಮತ್ಸ್ಯ ಮೇಳ: ಖಾದ್ಯ ವೈವಿಧ್ಯಕ್ಕೆ ವೇದಿಕೆ 

04:58 PM May 27, 2018 | Team Udayavani |

ಹುಬ್ಬಳ್ಳಿ: ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ವತಿಯಿಂದ ನಡೆಯುತ್ತಿರುವ ಮೀನು ಮಾರಾಟ ಮಳಿಗೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೇಶ್ವಾಪುರದ ಶಾಂತಿನಗರಲ್ಲಿರುವ ಮಾರಾಟ ಮಳಿಗೆಯಲ್ಲಿ ಎರಡು ದಿನದ ಮತ್ಸ್ಯ ಮೇಳಕ್ಕೆ ಶನಿವಾರ ಚಾಲನೆ ನೀಡಲಾಯಿತು.

Advertisement

ಹೊಟೇಲ್‌ ಉದ್ಯಮಿ ಸುಧಾಕರ ಶೆಟ್ಟಿ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ಕರಾವಳಿ ಭಾಗದಲ್ಲಿ ದೊರೆಯುವ ಮೀನಿಗೆ ಈ ಭಾಗದಲ್ಲಿ ಸಾಕಷ್ಟು ಬೇಡಿಕೆಯಿತ್ತು. ಈ ಬೇಡಿಕೆಯನ್ನು ಕರ್ನಾಟಕ ಮೀನುಗಾರಿಕೆ ನಿಗಮ ಈಡೇರಿಸಿದೆ. ಮಾರಾಟ ಮಳಿಗೆ ಆರಂಭಿಸುವ ಮೂಲಕ ಈ ಭಾಗದ ಮೀನು ಪ್ರಿಯರಿಗೆ ವಿವಿಧ ಬಗೆಯ ತಾಜಾ ಮೀನುಗಳನ್ನು ದೊರೆಯುವಂತೆ ಮಾಡಿದೆ. ದರ್ಶನಗಳಲ್ಲಿ 20 ಬಗೆಯ ಮೀನುಗಳು ಹಾಗೂ 12 ಬಗೆಯ ಖಾದ್ಯ ದೊರೆಯುತ್ತಿರುವುದು ಸಂತಸ ವಿಚಾರ ಎಂದು ಹೇಳಿದರು.

ಘಟಕದ ಮೇಲ್ವಿಚಾರಕ ಸಂದೇಶ ಕುಮಟಾಕರ ಮಾತನಾಡಿ, ಎಂದಿಗಿಂತ ಕಡಿಮೆ ದರದಲ್ಲಿ ವಿವಿಧ ಬಗೆ ಮೀನುಗಳನ್ನು ಮಾರಾಟ ಮಾಡಲಾಗುತ್ತಿದೆ. ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ವರ್ಷ ಮೇಳದಲ್ಲಿ ನಮ್ಮ ನಿರೀಕ್ಷೆಗೆ ಮೀರಿ ವಹಿವಾಟು ನಡೆದಿತ್ತು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next