Advertisement

ಹೊಳೆ ಮೀನುಗಳಿಗೆ ಮೀನು ಪ್ರಿಯರ ಗಾಳ!

12:03 AM Jul 10, 2019 | sudhir |

ಕಟಪಾಡಿ : ಮಾರುಕಟ್ಟೆಗೆ ಮೀನು ಬರುವುದು ಕಡಿಮೆಯಾಗುತ್ತಿದ್ದಂತೆ, ಇತ್ತ ಮೀನು ಪ್ರಿಯರು ಹೊಳೆಯಲ್ಲಿ ಗಾಳ ಹಾಕಿ ಮೀನು ಹಿಡಿಯುವ ಖುಷಿಯಲ್ಲಿದ್ದಾರೆ.

Advertisement

ಮಣಿಪುರ, ಉದ್ಯಾವರ, ಕಟಪಾಡಿ, ಕೆಮ್ತೂರು, ದುರ್ಗಾ ನಗರ, ನಾಯ್ಕ ತೋಟ, ಮಟ್ಟು, ಕುರ್ಕಾಲು, ರೈಲ್ವೇ ಮೇಲ್ಸೇತುವೆ, ಹೊಳೆಯ ಮೇಲ್ಸೇತುವೆಯ ತಪ್ಪಲುಗಳಲ್ಲಿ ಗಾಳ ಹಾಕಿ ಸಿಹಿನೀರಿನ ಮೀನಿಗಾಗಿ ಹಲವಾರು ಮಂದಿ ಜಾಲಾಡುತ್ತಿದ್ದಾರೆ.

ಸಮುದ್ರದಲ್ಲಿ ಯಾಂತ್ರಿಕ ಮೀನುಗಾರಿಕೆಗೆ ನಿಷೇಧವಿರುವುದರಿಂದ ಸಮುದ್ರದ ಮೀನುಗಳು ದೊರಕುತ್ತಿಲ್ಲ. ತಾಜಾ ಮೀನಿಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಮಾಂಸಾಹಾರಿಗಳು ಕೆರೆ ಅಥವಾ ಹೊಳೆ ಮೀನುಗಳನ್ನೇ ಅವಲಂಬಿಸಬೇಕಾಗಿದೆ. ಆದ್ದರಿಂದ ಸಿಹಿನೀರಿನ ಮೀನುಗಾರಿಕೆ ಚುರುಕುಗೊಂಡಿದೆ. ಮಳೆ ಬರುತ್ತಿದ್ದಂತೆ ಗಾಳ ಹಾಕಿದ ಮತ್ತು ಬಲೆಬೀಸಿ ತಂದ ಹೊಳೆಯ ತಾಜಾ ಮೀನುಗಳೂ ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಉತ್ತಮ ಬೇಡಿಕೆ

ಹೊಳೆ ಮೀನುಗಳಿಗೆ ಉತ್ತಮ ಬೇಡಿಕೆ ಇದೆ. ಹಳ್ಳ ತೊರೆಗಳು ಮಳೆಗಾಲದಲ್ಲಿ ತುಂಬಿಹರಿಯುವುದರಿಂದ ಮೀನುಗಳ ಸಂತತಿಯೂ ಹೆಚ್ಚು ಈ ತಾಜಾ ಮೀನುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ದರದಲ್ಲಿ ವಿಕ್ರಯವಾಗುತ್ತಿವೆ. ಮೀನು ಪ್ರಿಯರೂ ಹವ್ಯಾಸಿಗಳಾಗಿ ಹೊಳೆ ದಡದಲ್ಲಿ ಗಾಳ ಹಾಕಿ ಮೀನು ಹಿಡಿಯುತ್ತಾರೆ. ಹೊಳೆ ಮೀನು ಗಳು ಕೆಲವರಿಗೆ ಅನಿವಾರ್ಯವಾದರೆ, ರುಚಿ ಅರಿತವರು ದುಬಾರಿಯಾದರೂ ಮೀನು ಖರೀದಿಗೆ ಮುಗಿಬೀಳುತ್ತಿದ್ದಾರೆ.

ವಿವಿಧ ಮೀನು ಲಭ್ಯ
ಬಯ್ಯ, ಕೊಕ್ಕರ್‌, ಕಂಡಿಗೆ, ಕುರ್ಚಿ, ಮಟ್ಟೆ, ಏರಿ, ಕೆಂಬೇರಿ, ಕುಲೇಜಿ, ಕುದಂರ್‌ ತರು ಇತ್ಯಾದಿ ವಿಧದ ಹೊಳೆಯ ಮೀನುಗಳು ನಮ್ಮ ಗಾಳಕ್ಕೆ ಸಿಗುತ್ತದೆ. ಇದೇ ನಮಗೆ ಮಳೆಗಾಲದ ಆಹಾರ. ಬೆಳಗ್ಗೆಯಿಂದ ಮಧ್ಯಾಹ್ನ ಸುಮಾರು 3 ಗಂಟೆಯವರೆಗೂ ಮೀನಿನ ಬೇಟೆ ನಡೆಸುತ್ತೇವೆ.
-ಸಂತೋಷ್‌ ಕುಂದರ್‌, – ನಿತ್ಯಾನಂದ ಕೊಡವೂರು
ಮಾರಾಟ ಮಾಡುವುದಿಲ್ಲ

ನಾವು ಮೀನು ಪ್ರಿಯರು. ಮಾರಾಟ ಮಾಡುವುದಿಲ್ಲ. ಹೆಚ್ಚುವರಿ ಸಿಕ್ಕರೆ ಗೆಳೆಯರಿಗೆ ಹಂಚುತ್ತೇವೆ. ಸುಮಾರು ನಾಲ್ಕು ಸಾವಿರ ರೂ. ಬೆಲೆಯಷ್ಟರ ಮೀನುಗಳನ್ನು ನಾವು ಗಾಳ ಹಾಕಿ ಹಿಡಿಯುತ್ತೇವೆ.
– ಕಿಶೋರ್‌, ಉಮೇಶ್‌ ಅಗ್ರಹಾರ, ಪ್ರವೀಣ್‌
Advertisement
Advertisement

Udayavani is now on Telegram. Click here to join our channel and stay updated with the latest news.

Next