Advertisement

ಮಾರುಕಟ್ಟೆಯಲ್ಲಿ ಮೀನು ತುಟ್ಟಿ

11:45 AM Jun 12, 2019 | Vishnu Das |

ಮಂಗಳೂರು: ಈ ಸಾಲಿನ ಮೀನುಗಾರಿಕೆ ಋತು ಮುಕ್ತಾಯಗೊಂಡಿದೆ. ಚಂಡ ಮಾರುತದ ಹಿನ್ನೆಲೆಯಲ್ಲಿ ನಾಡ ದೋಣಿಗಳು ಸಮುದ್ರಕ್ಕೆ ಇಳಿಯುತ್ತಿಲ್ಲ. ಪರಿಣಾಮ ಮಾರು ಕಟ್ಟೆಯಲ್ಲಿ ಮೀನಿನ ಕೊರತೆ ಉಂಟಾಗಿದ್ದು, ದರ ಗಗನಕ್ಕೇರಿದೆ.

Advertisement

ಈಗ ತಮಿಳು ನಾಡಿನ ಕರಾವಳಿಯಲ್ಲಿ ಮೀನು ಗಾರಿಕೆ ಆರಂಭ ಗೊಂಡಿದೆ. ಅಲ್ಲಿಂದ ಕೆಲವು ಜಾತಿಯ ಮೀನುಗಳು ಮಂಗಳೂರಿಗೆ ಬರುತ್ತಿವೆ. ಆದ್ದರಿಂದ ದರ ಏರಿದೆ.

ಕರಾವಳಿಯಲ್ಲಿ ಹೆಚ್ಚಿನ ಬೇಡಿಕೆ ಇರುವ ಸಿಲ್ವರ್‌ ಫಿಶ್‌ ಸದ್ಯ 100 ರೂ.ಗೆ ಕೇವಲ 30 ಸಿಗುತ್ತಿವೆ. ಸದ್ಯ ತಮಿಳುನಾಡಿನಿಂದ ಬಂಗುಡೆ, ಬೂತಾಯಿ ಸೇರಿದಂತೆ ಕೆಲವೊಂದು ಮೀನುಗಳು ಮಾರುಕಟ್ಟೆಗೆ ಬರು ತ್ತಿದೆ. ಆದರೆ, ದರ ಹೆಚ್ಚಾಗಿದ್ದು ಒಂದು ಕೆ.ಜಿ. ಬಂಗುಡೆಗೆ ಸುಮಾರು 350 ರೂ. ಇದೆ. ಈ ಹಿಂದೆ ಒಂದು ಕೆ.ಜಿ. ಬಂಗುಡೆ ಸುಮಾರು 200 ರಿಂದ 250 ರೂ.ಗೆ ಸಿಗುತ್ತಿತ್ತು. ಸದ್ಯ ಒಂದು ಬೂತಾಯಿಗೆ 15 ರೂ. ಇದೆ. ಅಂಜಲ್‌ ಮೀನಿಗೆ ಬೇಡಿಕೆ ಇದ್ದರೂ, ಮಾರುಕಟ್ಟೆಯಲ್ಲಿ ಪೂರೈಕೆ ಕಡಿಮೆ ಇದೆ.

ತಿಂಗಳ ಬಳಿಕ ದರ ಕಡಿಮೆ ಸಾಧ್ಯತೆ
ಮೀನುಗಾರಿಕೆ ಮುಖಂಡರ ಪ್ರಕಾರ ಈ ತಿಂಗಳಿಡೀ ದರ ಏರಿದ ಸ್ಥಿತಿಯಲ್ಲಿಯೇ ಇರಲಿದೆ. ರಾಜ್ಯ ಕರಾವಳಿಗೆ ಮುಂಗಾರು ಆಗಮಿಸಿದ ಕೆಲವು ದಿನಗಳ ಬಳಿಕ ನಾಡದೋಣಿ ಮೀನು ಗಾರರು ಸಮುದ್ರಕ್ಕೆ ತೆರಳುತ್ತಾರೆ. ಬಳಿಕ ಮೀನಿನ ದರದಲ್ಲಿ ಕೊಂಚ ಕಡಿಮೆಯಾಗ ಬಹುದು.

ಮೀನುಗಾರಿಕೆ ಋತು ಪೂರ್ಣಗೊಂಡಿದ್ದು, ಬೋಟ್‌ಗಳು ಸಮುದ್ರಕ್ಕೆ ಇಳಿಯುತ್ತಿಲ್ಲ. ಚಂಡಮಾರುತ ಹಿನ್ನೆಲೆಯಲ್ಲಿ ನಾಡದೋಣಿಗಳು ಕೂಡ ಹೋಗುತ್ತಿಲ್ಲ. ಇದರಿಂದಾಗಿ ಮೀನಿನ ದರ ಹೆಚ್ಚಾಗಿದೆ.
– ನಿತಿನ್‌ ಕುಮಾರ್‌, ಟ್ರಾಲ್‌ಬೋಟ್‌ ಮೀನುಗಾರರ ಸಂಘದ ಅಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next