Advertisement

ಆರ್‌ಬಿಐ, ಸಿಬಿಐ ಒಗ್ಗೂಡಿಸಿ ಏಕತೆಯ ಬಗ್ಗೆ ಮಾತನಾಡಿ: ಮೋದಿಗೆ ವಘೇಲಾ

10:45 AM Oct 30, 2018 | Team Udayavani |

ಗಾಂಧಿನಗರ : “ಎಲ್ಲಕ್ಕಿಂತ ಮೊದಲು ನೀವು (ಪ್ರಧಾನಿ ನರೇಂದ್ರ ಮೋದಿ) ಆರ್‌ಬಿಐ ಮತ್ತು ಸಿಬಿಐ ಅನ್ನು ಒಗ್ಗೂಡಿಸಿ; ಅನಂತರವೇ ಏಕತೆಯ ಬಗ್ಗೆ ಮಾತನಾಡಿ’ ಎಂದು ಗುಜರಾತಿನ ಹಿರಿಯ ರಾಜಕಾರಣಿ ಶಂಕರ್‌ಸಿಂಗ್‌ ವಘೇಲಾ ಲೇವಡಿ ಮಾಡಿದ್ದಾರೆ.

Advertisement

ಸರ್ದಾರ್‌ ವಲ್ಲಭ ಭಾಯಿ ಪಟೇಲ್‌ ಅವರ “ಏಕತೆಯ ಪ್ರತಿಮೆ’ ಯೋಜನೆಯನ್ನು ಟೀಕಿಸಿ ಮಾತನಾಡಿದ ವಘೇಲಾ, ‘ಪ್ರಧಾನಿ ಮೋದಿ ಅವರ ಏಕತಾ ಪ್ರತಿಮೆಯ ಮಹತ್ವಾಕಾಂಕ್ಷಿ ಯೋಜನೆಯು ಬಿಜೆಪಿ ಸರಕಾರದ ಕೇವಲ ಒಂದು ಮಾರ್ಕೆಟಿಂಗ್‌ ಗಿಮಿಕ್‌ ಆಗಿದೆ’ ಎಂದು ಟೀಕಿಸಿದರು. 

”ಏಕತಾ ಪ್ರತಿಮೆಯನ್ನು ಅನಾವರಣಗೊಳಿಸುವ ಮುನ್ನ ನೀವು ಸಿಬಿಐ ಮತ್ತು ಆರ್‌ಬಿಐ ನಡುವೆ ಏಕತೆಯನ್ನು, ಹೊಂದಾಣಿಕೆಯನ್ನು  ಸಾಧಿಸಿ” ಎಂದು ಪ್ರಧಾನಿ ಮೋದಿ ಗೆ ಹೇಳಿದರು. 

”ಭಾರತೀಯ ರೂಪಾಯಿಯ ಪತನವನ್ನು ತಡೆಯುವುದಕ್ಕಾಗಿ, ಇಂಧನ ಬೆಲೆಯನ್ನು ಇಳಿಸುವುದಕ್ಕಾಗಿ ನೀವು ಮೊದಲು ಆರ್‌ಬಿಐ, ಸಿಬಿಐ ಅನ್ನು ಒಗ್ಗೂಡಿಸಿ; ಅನಂತರವೇ ಏಕತೆಯ ಮಾತನ್ನಾಡಿ” ಎಂದು ವಘೇಲಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next