Advertisement

ಜಿಲ್ಲೆಗೆ ಪ್ರಥಮ; ರಾಮ್‌-ರಾಜ್‌ ಕಾಲೇಜು ಸಾಧನೆ

10:17 AM Apr 28, 2019 | Naveen |

ಹುಮನಾಬಾದ: ಉನ್ನತ ಗುರಿ, ಉತ್ತಮ ಗುರು ಇದ್ದರೆ ಅಸಾಧ್ಯವಾದದ್ದನ್ನೂ ಸಾಧಿಸಲು ಸಾಧ್ಯ ಎಂಬಂತೆ ಉತ್ತಮ ಆಡಳಿತ ಮಂಡಳಿ, ಪ್ರತಿಭಾವಂತ ಉಪನ್ಯಾಸಕರಿದ್ದರೆ ಪರೀಕ್ಷೆಯಲ್ಲಿ ಸರಳವಾಗಿ ಉತ್ತಮ ಫಲಿತಾಂಶ ತರಬಹುದು ಎಂಬ ಮಾತು, ಅನುದಾನಿತ ವಿವೇಕಾನಂದ ಶಿಕ್ಷಣ ಸಂಸ್ಥೆಯ ರಾಮ್‌ ಮತ್ತು ರಾಜ್‌ ಪದವಿಪೂರ್ವ ಕಾಲೇಜಿಗೆ ಅನ್ವಯವಾಗುವಂತಹದು.

Advertisement

ಪಟ್ಟಣದ ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆಯಿಂದ ರಾಮ್‌ ಮತ್ತು ರಾಜ್‌ ಹೆಸರಿನಲ್ಲಿ 1988-89ನೇ ಸಾಲಲ್ಲಿ ಅತ್ಯಲ್ಪ ಸಂಖ್ಯೆಯ ವಿದ್ಯಾರ್ಥಿಗಳಿಂದ ಆರಂಭಗೊಂಡ ಪದವಿಪೂರ್ವ ಕಾಲೇಜು ಈಗ 3 ದಶಕ ಪೂರೈಸಿದೆ. ಈ ಹಂತದಲ್ಲಿ 2016, 2018 ಮತ್ತು 2019ನೇ ಸಾಲಿನಲ್ಲಿ ಇಡೀ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಜಿಲ್ಲೆಯ ಇತರ ಶಿಕ್ಷಣ ಸಂಸ್ಥೆಗಳ ನಿದ್ದೆಗೆಡಿಸಿದೆ. 2019ನೇ ಸಾಲಿನಲ್ಲಿ ಈ ಸಂಸ್ಥೆ ಶೇ.85.02 ಫಲಿತಾಂಶ ಪಡೆದಿದೆ.

ಇತರೆ ಶಿಕ್ಷಣ ಸಂಸ್ಥೆಗಳಂತೆ ಬೆಳಗ್ಗೆ 10 ಗಂಟೆಗೆ ವರ್ಗ ಆರಂಭಿಸದೇ 8 ಗಂಟೆಗೆ ಆರಂಭಿಸಿ, ಸಂಜೆ 5:30ರ ವರೆಗೆ ವರ್ಗಗಳನ್ನು ನಡೆಸುತ್ತದೆ. ವರ್ಗ ಕೋಣೆಯಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ಸಮಾನವಾಗಿ ಕಂಡು ಉಪನ್ಯಾಸಕರು ಬೋಧಿಸುತ್ತಾರೆ. ಆ ಬಳಿಕವೂ ಸುಧಾರಣೆ ಕಾಣದೇ ಇದ್ದಾಗ ತಕ್ಷಣ ಅರ್ಥ ಮಾಡಿಕೊಳ್ಳದ ವಿದ್ಯಾರ್ಥಿಗಳಿಗೆ ಅವರ ಮನಸ್ಥಿತಿ ಗಮನದಲ್ಲಿ ಇರಿಸಿಕೊಂಡು ಮಧ್ಯಮ ಮತ್ತು ಸಾಮಾನ್ಯ ಗ್ರಹಿಕೆಯುಳ್ಳ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರತ್ಯೇಕ ವರ್ಗಗಳನ್ನು ನಡೆಸಿ ಫಲಿತಾಂಶ ಸುಧಾರಣೆಗೆ ಯತ್ನಿಸುತ್ತಾರೆ.

ಪ್ರತೀ ಪಾಠ ಪೂರ್ಣಗೊಂಡ ಬೆನ್ನಲ್ಲೇ ಟೆಸ್ಟ್‌ ಕಡ್ಡಾಯವಾಗಿ ನಡೆಸುತ್ತಾರೆ. ಪ್ರತೀ ತಿಂಗಳಿಗೊಂದು ವಿಷಯವಾರು ಪ್ರತ್ಯೇಕ ಟೆಸ್ಟ್‌ ತೆಗೆದುಕೊಂಡು ಪಡೆಯವ ಅಂಕಗಳನ್ನು ಅಧಾರವಾಗಿ ಇಟ್ಟುಕೊಂಡು ಜಾಣ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಮಧ್ಯ ಗುಂಪು ಚರ್ಚೆ ಆಯೋಜಿಸಿ ಎಲ್ಲ ವಿದ್ಯಾರ್ಥಿಗಳನ್ನು ಸಮಾನ ವಾಹಿನಿಗೆ ತರಲು ಯತ್ನಿಸುತ್ತಾರೆ. ಇದರಿಂದ ಅನುತ್ತೀರ್ಣರಾಗುವ ವಿದ್ಯಾರ್ಥಿಗಳನ್ನು ಕನಿಷ್ಟ 40-45 ಅಂಕ ಪಡೆಯುವ ಮಟ್ಟಕ್ಕೆ ತಂದು ನಿಲ್ಲಿಸುವ ಮೂಲಕ ಫಲಿತಾಂಶ ಸುಧಾರಣೆಗೆ ಶಕ್ತಿಮೀರಿ ಪ್ರಯತ್ನಿಸುತ್ತಾರೆ.

ಕಾಲೇಜು ಕಟ್ಟಡಕ್ಕಿಂತ ಗುಣಮಟ್ಟದ ಶಿಕ್ಷಣ ಮುಖ್ಯ. ಸೂಟು ಬೂಟಿಗಿಂತ ಅಧ್ಯಯನಪರ ಉಪನ್ಯಾಸಕರು ಮುಖ್ಯ. ನಾವು ಪ್ರಚಾರಕ್ಕೆ ಯಾವತ್ತೂ ವಿಶೇಷ ಮಹತ್ವ ನೀಡಿಲ್ಲ. ಗುಣಮಟ್ಟಕ್ಕೆ ಹೆಚ್ಚು ಮಹತ್ವ ನೀಡಿದ್ದೇವೆ. ಪ್ರಚಾರದ ಸಿಹಿ ಕ್ಷಣಿಕ, ಗುಣಮಟ್ಟವೇ ಶಾಶ್ವತ. ಪ್ರಚಾರ ಬೇಕು. ಆದರೆ ಸಾಧನೆಗೆ ಅದೊಂದೇ ಕಾರಣವಲ್ಲ ಎಂದು ನಂಬಿದವರು ನಾವು. ನಂಬಿದರೆ ನಂಬಿ ಬಿಟ್ಟರೆ ಬಿಡಿ. ನಮ್ಮ ಮಹಾವಿದ್ಯಾಲಯದಲ್ಲಿ ಎಸ್‌ಎಸ್‌ಎಲ್ಸಿಯಲ್ಲಿ ಶೇ.90 ಅಂಕ ಪಡೆದ ವಿದ್ಯಾರ್ಥಿಗಳು ದೊಡ್ಡ ನಗರಳಲ್ಲಿನ ಕಾಲೇಜಿನಲ್ಲಿ ಪ್ರವೇಶ ಪಡೆದು ಶೇ.70-75 ಫಲಿತಾಂಶ ಪಡೆದಿದ್ದಾರೆ. ನೀವೇ ವಿವೇಚಿಸಿ, ಸ್ಥಳೀಯ ಸಂಸ್ಥೆ ಉತ್ತಮವೋ, ಮಹಾನಗರಗಳಲ್ಲಿನ ಶಿಕ್ಷಣ ಉತ್ತಮವೋ ಎಂಬುದನ್ನು.
• ಮಾಣಿಕಪ್ಪ ಗಾದಾ,
 ಅಧ್ಯಕ್ಷರು, ವಿವೇಕಾನಂದ ಶಿಕ್ಷಣ ಸಂಸ್ಥೆ

Advertisement

ಹಿತ್ತಲಗಿಡ ಮದ್ದಲ್ಲ ಎಂಬಂತೆ ಸ್ಥಳೀಯವಾಗಿ ಎಷ್ಟೇ ಗುಣಮಟ್ಟದ ಶಿಕ್ಷಣ ನೀಡಿದರೂ ಪಾಲಕರಿಗೆ ಅದೆಲ್ಲ ಗೌಣವಾಗುತ್ತಿದೆ. ದೂರದ ಊರು, ಹೆಚ್ಚು ಶುಲ್ಕ ಇರುವಲ್ಲೇ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎನ್ನುವ ತಪ್ಪುಕಲ್ಪನೆ ಪಾಲಕರಲ್ಲಿ ಮನೆ ಮಾಡಿದೆ. ಇದೆಲ್ಲದರ ಜೊತೆಗೆ ಪಾಲಕರು ಪತ್ರಿಕೆ, ಟಿವಿಗಳಲ್ಲಿ ನೀಡುವ ಪ್ರಚಾರಕ್ಕೆ ಮರುಳಾಗಿ ಲಕ್ಷಾಂತರ ಶುಲ್ಕ ಪಾವತಿಸುತ್ತಾರೆ. ಆದರೆ ಸ್ಥಳೀಯ ಕಾಲೇಜುಗಳಲ್ಲಿ ಅದರ ಶೇ.25 ಶುಲ್ಕ ಪಾವತಿಸಲು 10 ಬಾರಿ ವಿಚಾರಿಸುತ್ತಾರೆ. ಪರಿಸ್ಥಿತಿ ಹೀಗಿರಬೇಕಾದರೆ ಕನಿಷ್ಟ ಶುಲ್ಕದಲ್ಲಿ ಈ ವಿದ್ಯಾರ್ಥಿಗಳಿಗೆ ಗುಣಮಟ್ದ ಶಿಕ್ಷಣ ಶಿಕ್ಷಣ ಹೇಗೆ ನೀಡಲು ಸಾಧ್ಯ? ಆದರೂ ನಮ್ಮಲ್ಲಿನ ಸಂಪನ್ಮೂಲ ಬಳಕೆ ಮಾಡಿಕೊಂಡು ಮುಂದಿನ ವರ್ಷ ಶೇ.90ಕ್ಕೂ ಹೆಚ್ಚು ಫಲಿತಾಂಶ ತರಲು ಶಕ್ತಿಮೀರಿ ಯತ್ನಿಸುತ್ತಿದ್ದೇವೆ.• ಮಲ್ಲಿನಾಥ ಚಿಂಚೋಳಿ,
ರಾಮ್‌ ಮತ್ತು ರಾಜ್‌ ಪಪೂ ಕಾಲೇಜು ಪ್ರಾಚಾರ್ಯ

ಶಶಿಕಾಂತ ಕೆ.ಭಗೋಜಿ

Advertisement

Udayavani is now on Telegram. Click here to join our channel and stay updated with the latest news.

Next