Advertisement

ಇಂದು ನಾರ್ವೆಯಲ್ಲಿ ಕ್ಷಮಿಸಿ

12:30 AM Feb 15, 2019 | Team Udayavani |

ಕನ್ನಡದ ಅನೇಕ ಚಿತ್ರಗಳು ವಿದೇಶಗಳಲ್ಲಿ ಪ್ರದರ್ಶನವಾಗಿವೆ. ಅದರಲ್ಲೂ ಬಿಡುಗಡೆ ನಂತರ ಪ್ರದರ್ಶನಗೊಂಡಿರುವುದೇ ಹೆಚ್ಚು. ಈಗ ಹೊಸಬರ ಚಿತ್ರವೊಂದು ನಾರ್ವೆ ದೇಶದಲ್ಲಿ ಪೂರ್ವಭಾವಿ ಪ್ರದರ್ಶನವಾಗುತ್ತಿದೆ. ಭರತ್‌ ಎಸ್‌.ನಾವುಂದ ನಿರ್ದೇಶನದ “ಅಡಚಣೆಗಾಗಿ ಕ್ಷಮಿಸಿ’ ಚಿತ್ರದ ಪ್ರೀಮಿಯರ್‌ ಶೋ ಫೆಬ್ರವರಿ 16 ರಂದು ನಾರ್ವೆ ದೇಶದ ಓಸ್ಲೋ ನಗರದಲ್ಲಿ ನಡೆಯಲಿದೆ. ಇದೇ ಮೊದಲ ಬಾರಿಗೆ ಕನ್ನಡದ ಚಿತ್ರವೊಂದು ಬಿಡುಗಡೆ ಮುನ್ನವೇ ನಾರ್ವೆ ದೇಶದಲ್ಲಿ ಪೂರ್ವಭಾವಿ ಪ್ರದರ್ಶನ ಕಾಣುತ್ತಿರುವುದು ವಿಶೇಷ.

Advertisement

ಅಂದಹಾಗೆ, “ಅಡಚಣೆಗಾಗಿ ಕ್ಷಮಿಸಿ’ ಚಿತ್ರದ ಪೂರ್ವಭಾವಿ ಪ್ರದರ್ಶನದ ಉಸ್ತುವಾರಿಯನ್ನು ಚಿತ್ರದ ಕಾರ್ಯಕಾರಿ ನಿರ್ಮಾಪಕ ಹಾಗು ನಾರ್ವೆ ದೇಶದ ಪ್ರಜೆಯಾಗಿರುವ ಮಧುಸೂದನ್‌ ಶ್ರೀನಿವಾಸ್‌ ಅವರು ವಹಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಸದ್ಗುಣ ಮೂರ್ತಿ ನಿರ್ಮಾಪಕರು. ಪ್ರದೀಪ್‌ ವರ್ಮ ನಾಯಕರಾಗಿರುವ ಈ ಚಿತ್ರದಲ್ಲಿ ವಿದ್ಯಾ ಕುಲಕರ್ಣಿ, ಕೆ.ಎಸ್‌.ಶ್ರೀಧರ್‌, ಶ್ರೀನಿವಾಸ್‌ ಪ್ರಭು, ಪ್ರೀತುಪೂಜಾ, ಮೇಘ, ಸುಶೀಲ್‌ಕುಮಾರ್‌, ಶಿವಮಂಜು, ಅಗಸ್ತ್ಯ, ಹರಿಪ್ರಸಾದ್‌ ನಟಿಸಿದ್ದಾರೆ. ಎಸ್‌.ಪ್ರದೀಪ್‌ ವರ್ಮ ಸಂಗೀತವಿದೆ. ರವಿವರ್ಮ ಛಾಯಾಗ್ರಹಣ, ಅರ್ಜುನ್‌ ಕಿಟ್ಟು ಸಂಕಲನವಿದೆ.
 

Advertisement

Udayavani is now on Telegram. Click here to join our channel and stay updated with the latest news.

Next