Advertisement

ಫೆ.15 ರಂದು “ಬಿಚ್ಚುಗತ್ತಿ’ಫ‌ಸ್ಟ್‌ಲುಕ್‌

05:35 AM Feb 13, 2019 | |

ರಾಜವರ್ಧನ್‌ ನಾಯಕರಾಗಿರುವ “ಬಿಚ್ಚುಗತ್ತಿ’ ಸಿನಿಮಾದ ಮುಹೂರ್ತಕ್ಕೆ ದರ್ಶನ್‌ ಬಂದು ಶುಭಕೋರಿದ್ದರು. ಈಗ ಆ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಚಿತ್ರದ ಫ‌ಸ್ಟ್‌ಲುಕ್‌ ಹೊರಬರುವ ಹಂತಕ್ಕೆ ಬಂದಿದೆ. ಚಿತ್ರದ ಫ‌ಸ್ಟ್‌ಲುಕ್‌ ಅನ್ನು ಕೂಡಾ ದರ್ಶನ್‌ ಬಿಡುಗಡೆ ಮಾಡಲಿದ್ದಾರೆ.

Advertisement

ದರ್ಶನ್‌ ಅವರೇ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆ ಮಾಡಿದರೆ ಚೆಂದ ಎಂಬ ಚಿತ್ರತಂಡದ ಆಸೆಗೆ ಓಕೆ ಅಂದಿರುವ ದರ್ಶನ್‌ ಫೆ.15 ರಂದು ಚಿತ್ರದ ಫ‌ಸ್ಟ್‌ಲುಕ್‌ ಹಾಗೂ ಮೋಶನ್‌ ಪೋಸ್ಟರ್‌ ರಿಲೀಸ್‌ ಮಾಡಲಿದ್ದಾರೆ. ಹರಿ ಸಂತೋಷ್‌ ಈ ಸಿನಿಮಾದ ನಿರ್ದೇಶಕರು. ಈ ಹಿಂದೆ “ಅಲೆಮಾರಿ’, “ಡವ್‌’, “ಕಾಲೇಜು ಕುಮಾರ’, “ವಿಕ್ಟರಿ-2′ ಸಿನಿಮಾ ಮಾಡಿರುವ ಸಂತು, ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಐತಿಹಾಸಿಕ ಸಿನಿಮಾವಿದು. 

ಈ ಚಿತ್ರಕ್ಕೆ ಸಾಹಿತಿ ಬಿ.ಎಲ್‌.ವೇಣು ಚಿತ್ರದ ಕಥೆ, ಸಂಭಾಷಣೆ ಬರೆದಿ¨ªಾರೆ. ರಾಜ ಬಿಚ್ಚುಗತ್ತಿ ಭರಮಣ್ಣ ನಾಯಕನ ಕಥೆ ಈ ಚಿತ್ರದಲ್ಲಿದ್ದು, ಹದಿನಾರನೇ ಶತಮಾನದಲ್ಲಿ ನಡೆದ ಐತಿಹಾಸಿಕ ಘಟನಾವಳಿಗಳನ್ನೇ ಸಿನಿಮಾರೂಪಕ್ಕೆ ತರಲಾಗುತ್ತಿದೆ. ಚಿತ್ರದಲ್ಲಿ ರಾಜವರ್ಧನ್‌ ಭರಮಣ್ಣ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಪಾತ್ರಕ್ಕಾಗಿ ಕುದುರೆ ಸವಾರಿ, ಕತ್ತಿ ವರಸೆ, ಕಲರಿ ಎಲ್ಲವನ್ನೂ ಕಲಿತು ಕ್ಯಾಮೆರಾ ಮುಂದೆ ನಿಂತಿದ್ದಾರೆ ರಾಜವರ್ಧನ್‌. “ಬಾಹುಬಲಿ’ ಪ್ರಭಾಕರ್‌ ಮುದ್ದಣ್ಣನ ಪಾತ್ರ ನಿರ್ವಸುತ್ತಿದ್ದು, ಹರಿಪ್ರಿಯಾ ನಾಯಕಿ. ಉಳಿದಂತೆ ಕಲ್ಯಾಣಿ, ಶರತ್‌ ಲೋತಾಶ್ವ, ಶ್ರೀನಿವಾಸ ಮೂರ್ತಿ, ಸ್ಪರ್ಶ ರೇಖಾ ನಟಿಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next