Advertisement

ಯುಎಇಯಲ್ಲಿ ಉಕ್ಕು ,ಕಬ್ಬಿಣ ಬಳಸದ ದೇಗುಲ

10:04 AM Feb 16, 2020 | Sriram |

ದುಬಾೖ: ಎರಡು ವರ್ಷಗಳ ಹಿಂದೆ ಪ್ರಧಾನಿ ಮೋದಿ ಯುಎಇಯಲ್ಲಿ ಶಿಲಾನ್ಯಾಸ ನೆರವೇರಿಸಿದ್ದ ಸ್ವಾಮಿ ನಾರಾಯಣ ದೇವಸ್ಥಾನ ಲೋಹದ ಬಳಕೆಯಿಲ್ಲದೆ ವಿಶಿಷ್ಟವಾಗಿ ನಿರ್ಮಾಣವಾಗುತ್ತಿದೆ.

Advertisement

ಯುಎಇಯಲ್ಲಿ ಹಿಂದೂ ಮೊದಲ ದೇಗುಲವಿದು. ಇದನ್ನು ಉಕ್ಕು ಮತ್ತು ಕಬ್ಬಿಣ ಬಳಕೆ ಮಾಡದೆಯೇ ಭಾರತೀಯ ಸಾಂಪ್ರದಾಯಿಕ ವಾಸ್ತು ಶೈಲಿಯಲ್ಲಿ ನಿರ್ಮಿಸಲಾಗುತ್ತಿದೆ. ಹಾರು ಬೂದಿಯಿಂದ ನಿರ್ಮಿಸಲಾದ ಕಾಂಕ್ರೀಟ್‌ ಬಳಸ ಲಾಗುತ್ತಿದೆ. ಬೋಚಾಸನಸ್ವಾಮಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿ ನಾರಾಯಣ ಸಂಸತ್‌ (ಬಿಎಪಿಎಸ್‌) ಅದರ ಹೊಣೆ ಹೊತ್ತುಕೊಂಡಿದೆ. ಗುರುವಾರ ನಿರ್ಮಾಣ ಆರಂಭವಾಗಿದ್ದು, ಯುಇಎ ಮತ್ತು ಇತರ ಅರಬ್‌ ರಾಷ್ಟ್ರಗಳಿಂದ ಬಂದ ಸಾವಿರಾರು ಭಾರತೀಯರು ಈ ಸಂಭ್ರಮದ ಕ್ಷಣಗಳನ್ನು ಕಣ್ತುಂಬಿಕೊಂಡರು.

ಎರಡು ವರ್ಷಗಳ ಹಿಂದೆ ಪ್ರಧಾನಿ ಮೋದಿ ದುಬಾೖಗೆ ಭೇಟಿ ನೀಡಿದ್ದ ವೇಳೆ ದೇಗುಲ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು.

ಹಾರು ಬೂದಿ ಬಳಕೆ
ಕಾಮಗಾರಿಯ ಬಗ್ಗೆ ವಿವರಣೆ ನೀಡಿರುವ ಸಮಿತಿ ವಕ್ತಾರ ಅಶೋಕ್‌ ಕೋಟೆಚಾ, ದೇಗುಲದ ಅಡಿಪಾಯಕ್ಕೆ ಕಬ್ಬಿಣ, ಉಕ್ಕು ಬಳಸುತ್ತಿಲ್ಲ. ಹಾರು ಬೂದಿಯ ಕಾಂಕ್ರೀಟ್‌ ಬಲಿಷ್ಠವಾಗಿದ್ದು, ರಾಸಾಯನಿಕ ಪ್ರತಿರೋಧ ಗುಣ ಹೊಂದಿ ರುವುದರಿಂದ ಬಾಳಿಕೆ ಹೆಚ್ಚು ಎಂದಿದ್ದಾರೆ.

ಪ್ರಮುಖರ ಉಪಸ್ಥಿತಿ
ನಿರ್ಮಾಣ ಆರಂಭದ ವೇಳೆ ಯುಎಇಯಲ್ಲಿ ಭಾರತದ ರಾಯಭಾರಿ ಪವನ್‌ ಕಪೂರ್‌ ಮತ್ತು ದುಬಾೖಯಲ್ಲಿರುವ ಭಾರತದ ದೂತಾವಾಸ ಕಚೇರಿಯ ಕಾನ್ಸುಲ್‌ ಜನರಲ್‌ ವಿಪುಲ್‌, ಭಾರತೀಯ ವ್ಯಾಪಾರ ಸಮುದಾಯದ ಪ್ರಮುಖ ಸದಸ್ಯರು ಮತ್ತು ಸಮುದಾಯ ಅಭಿವೃದ್ಧಿ ಪ್ರಾಧಿಕಾರ (ಸಿಡಿಎ), ದುಬಾೖ ಮತ್ತು ಅಬುಧಾಬಿಯ ಸದಸ್ಯರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next