Advertisement

“ಥರ್ಡ್‌ ಕ್ಲಾಸ್‌’ಚಿತ್ರಕ್ಕೆ “ಫ‌ಸ್ಟ್‌ ಕ್ಲಾಸ್‌’ರೆಸ್ಪಾನ್ಸ್‌

10:19 AM Feb 26, 2020 | Lakshmi GovindaRaj |

ಫೆಬ್ರವರಿ ಮೊದಲ ವಾರ “ಥರ್ಡ್‌ ಕ್ಲಾಸ್‌’ ಚಿತ್ರ ತೆರೆಗೆ ಬಂದಿದ್ದು ಗೊತ್ತಿರಬಹುದು. ಜಗದೀಶ್‌, ರೂಪಿಕಾ, ಅವಿನಾಶ್‌, ರಮೇಶ್‌ ಭಟ್‌, ಸಂಗೀತಾ ಸೇರಿದಂತೆ ಇನ್ನು ಹಲವು ಕಲಾವಿದರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ “ಥರ್ಡ್‌ ಕ್ಲಾಸ್‌’ ಚಿತ್ರ ಇದೀಗ ಯಶಸ್ವಿಯಾಗಿ ಮೂರನೇ ವಾರದ ಪ್ರದರ್ಶನ ಕಾಣುತ್ತ ಮುನ್ನುಗ್ಗುತ್ತಿದೆ. ಇದೇ ಖುಷಿ ಹಂಚಿಕೊಳ್ಳಲು ಪತ್ರಕರ್ತರ ಮುಂದೆ ಬಂದಿದ್ದ ಚಿತ್ರತಂಡ, “ಥರ್ಡ್‌ ಕ್ಲಾಸ್‌’ ಬಿಡುಗಡೆ ಬಳಿಕ ಸಿಗುತ್ತಿರುವ ಪ್ರತಿಕ್ರಿಯೆ ಬಗ್ಗೆ ಒಂದಷ್ಟು ಮಾತನಾಡಿತು.

Advertisement

ಮೊದಲು ಮಾತಿಗಿಳಿದ ನಾಯಕ ಕಂ ನಿರ್ಮಾಪಕ ಜಗದೀಶ್‌, “ನಮ್ಮ ಸಿನಿಮಾದ ಶೀರ್ಷಿಕೆ “ಥರ್ಡ್‌ ಕ್ಲಾಸ್‌’ ಅಂತಿದ್ದರೂ, ಪ್ರೇಕ್ಷಕರು ಸಿನಿಮಾ ನೋಡಿ ಇಷ್ಟಪಟ್ಟು, “ಫ‌ಸ್ಟ್‌ ಕ್ಲಾಸ್‌’ ಅಂತ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ ಮೂಲಕ ಯಾವುದು ಸರಿ, ಯಾವುದು ತಪ್ಪು, ಯಾವುದು ಒಳ್ಳೇಯದು-ಕೆಟ್ಟದ್ದು ಅಂತ ತಿಳಿದುಕೊಳ್ಳಲು ಸಮಯವಕಾಶ ಸಿಕ್ಕಿತ್ತು. ಉತ್ತರ ಕರ್ನಾಟಕದಲ್ಲಿ ಸಿನಿಮಾಕ್ಕೆ ಹೆಚ್ಚು ಪ್ರಚಾರ ಮಾಡಿದ್ದರಿಂದ, ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.

ಚಿತ್ರದುರ್ಗ, ಬಾಗಲಕೋಟೆ ಮೊದಲಾದ ಕಡೆ ಚಿತ್ರಮಂದಿರಗಳಿಗೆ ಭೇಟಿ ನೀಡಿದಾಗ, ಪ್ರೇಕ್ಷಕರು ಕಣ್ಣೀರು ಬಾರದೆ ಹೊರಗೆ ಬರುವುದಕ್ಕೆ ಆಗಲಿಲ್ಲವೆಂದು ಹೇಳಿದರು. ಈ ಮಾತು ಕೇಳಿದಾಗ ಖುಷಿ ಆಯಿತು. ಸಿನಿಮಾದ ಕೊನೆಯ ಒಂದು ನಿಮಿಷದ ಕ್ಲೈಮಾಕ್ಸ್‌ ತಂದೆ-ತಾಯಿಯನ್ನು ನೆನಪಿಸುತ್ತದೆ. ಒಂದೊಳ್ಳೆ ಸಿನಿಮಾ ಮಾಡಿದ ತೃಪ್ತಿ ಈ ಸಿನಿಮಾದಿಂದ ಸಿಕ್ಕಿದೆ’ ಎಂದರು. ನಾಯಕಿ ರೂಪಿಕಾ ಮಾತನಾಡಿ, “ಚಲುವಿನ ಚಿಲಿಪಿಲಿ’ ಮೊದಲ ಸಿನಿಮಾದ ನಂತರ ಈ ಸಿನಿಮಾದ ಸಕ್ಸಸ್‌ ಮೀಟ್‌ನಲ್ಲಿ ಭಾಗಿಯಾಗಿದ್ದೇನೆ.

ಈ ಹತ್ತು ವರ್ಷದಲ್ಲಿ ಏಳು-ಬೀಳು ಕಂಡಿದ್ದೇನೆ. ಕಲಾವಿದರು, ತಾಂತ್ರಕತೆ ಶಕ್ತಿಶಾಲಿಯಾಗಿದ್ದರಿಂದ ಸಿನಿಮಾ ಗೆದ್ದಿದೆ. ಯಾವುದೇ ನಟ, ನಟಿ ಆಗಲಿ ಬ್ರೇಕ್‌ ಸಿಗಬೇಕೆಂಬ ಬಯಕೆ ಇರುತ್ತದೆ. ಫ್ಯಾಮಿಲಿ ಆಡಿಯನ್ಸ್‌ಗೆ ಸಿನಿಮಾ ಇಷ್ಟವಾಗ್ತಿದೆ. ಸದ್ಯ ಇನ್ನೂ ಚಿತ್ರದ ಪ್ರಚಾರ ಕಾರ್ಯ ಮಾಡುತ್ತಿದ್ದೇವೆ. ಮುಂದೆಯೋ ಇದೇ ಪ್ರೋತ್ಸಾಹ ಇರಲಿ’ ಎಂದು ಕೇಳಿಕೊಂಡರು. ಇನ್ನು, ನಿರ್ದೇಶಕ ಅಶೋಕ ದೇವ್‌ ಕೂಡ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಖುಷಿಯಲ್ಲಿದ್ದಾರೆ. ಚಿತ್ರದ ಕಲಾವಿದರು, ತಂತ್ರಜ್ಞರು “ಥರ್ಡ್‌ ಕ್ಲಾಸ್‌’ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಗಳ ಕುರಿತು ಹೇಳಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next